ಸಿದ್ಧರಾಮಯ್ಯ ವರುಣಾದಿಂದ ಟಿಕೆಟ್ ಕೇಳಿದ್ರು, ಕೊಟ್ಟಿದ್ದೇವೆ: ಬೇರೆ ವಿಚಾರ ಚರ್ಚೆಗೆ ಬಂದಿಲ್ಲ- ಡಿ.ಕೆ ಶಿವಕುಮಾರ್.

ಬೆಂಗಳೂರು,ಮಾರ್ಚ್,29,2023(www.justkannada.in):  ವರುಣಾ ಮತ್ತು ಕೋಲಾರ ಎರಡು ಕ್ಷೇತ್ರದಿಂದ ಮಾಜಿ ಸಿಎಂ ಸಿದ್ಧರಾಮಯ್ಯ ಸ್ಪರ್ಧೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್, ಸಿದ್ಧರಾಮಯ್ಯ ವರುಣಾದಿಂದ ಟಿಕೆಟ್ ಕೇಳಿದ್ರು, ಕೊಟ್ಟಿದ್ದೇವೆ. ಬೇರೆ ಯಾವುದೇ ವಿಚಾರವೂ ಚರ್ಚೆಗೆ  ಬಂದಿಲ್ಲ ಎಂದಿದ್ದಾರೆ.

ರಾಜ್ಯ ವಿಧಾನಸಭೆ ಚುನಾವಣೆ ಘೋಷಣೆಯಾದ ಹಿನ್ನೆಲೆ ಮಾತನಾಡಿದ ಡಿ.ಕೆ ಶಿವಕುಮಾರ್,  ಮೇ 10 ಚುನಾವಣೆ ಮಾತ್ರವೇ ಅಲ್ಲ. ಭ್ರಷ್ಟ ಸರ್ಕಾರವನ್ನ ತೆಗೆದು ಹಾಕುವ ದಿನ. ಡಬಲ್ ಇಂಜಿನ್ ಫೇಲ್, ಹೀಗಾಗಿ ಹೊಸ ಇಂಜಿನ್ ರೆಡಿಯಾಗುತ್ತಿದೆ. ಜನರು ಹೊಸ ಇಂಜಿನ್ ರೆಡಿ ಮಾಡುತ್ತಿದ್ದಾರೆ. ರಾಜ್ಯದಲ್ಲಿ ಹೊಸ ಸರ್ಕಾರ ತರಲು ಚುನಾವಣೆ ಘೋಷಣೆಯಾಗಿದೆ ಎಂದರು.

ಏಪ್ರಿಲ್ 5 ರಂದು  ಕೋಲಾರದಲ್ಲಿ ಸತ್ಯಮೇವ ಜಯತೆ ಸಮಾವೇಶ ನಡೆಯಲಿದೆ. ಸಮಾವೇಶದಲ್ಲಿ ರಾಹುಲ್ ಗಾಂಧಿ ಭಾಗಿಯಾಗಲಿದ್ದಾರೆ. ಈಗ ಮತ್ತೆಕೋಲಾರದಿಂದ ಹೋರಾಟ ಆರಂಭಿಸುತ್ತಿದ್ದಾರೆ ಎಂದು ಡಿ.ಕೆ ಶಿವಕುಮಾರ್ ತಿಳಿಸಿದರು.

Key words: Siddaramaiah – tickets – Varuna-discussion – DK Shivakumar.