9 ತಿಂಗಳ ಹಸುಗೂಸನ್ನ ಯುವಕನ ಕೈಗೆ ಕೊಟ್ಟು ಅಪರಿಚಿತ ಮಹಿಳೆ ನಾಪತ್ತೆ: ಕಂದನನ್ನ ರಕ್ಷಿಸಿ ಮಾನವೀಯತೆ ಮೆರೆದ ಪೊಲೀಸರು.

ಮೈಸೂರು,ಮೇ,9,2022(www.justkannada.in):  ಅಪರಿಚಿತ ಮಹಿಳೆಯೋರ್ವಳು 9 ತಿಂಗಳ ಹಸುಗೂಸನ್ನ ಮೈಸೂರು ಮೂಲದ ಯುವಕನ ಕೈಗೆ ಕೊಟ್ಟು ನಾಪತ್ತೆಯಾಗಿರುವ ಘಟನೆ ರಾಯಚೂರಿನಲ್ಲಿ ನಡೆದಿದ್ದು ಯುವಕ ಕರೆತಂದ ಮಗುವನ್ನ ಲಷ್ಕರ್ ಠಾಣೆ ಪೊಲೀಸರು ರಕ್ಷಿಸಿ ಮಾನವೀಯತೆ ಮೆರೆದಿದ್ದಾರೆ.

ಮೈಸೂರಿನ ಹೆಚ್.ಡಿ.ಕೋಟೆಯ ನಿವಾಸಿ ರಘು ಅವರು ವೈಯುಕ್ತಿಕ ಕೆಲಸಕ್ಕಾಗಿ ರಾಯಚೂರಿಗೆ ತೆರಳಿದ್ದರು. ಈ ಮಧ್ಯೆ ಮೈಸೂರಿಗೆ ಹಿಂದಿರುಗಲು ರಘು ರಾಯಚೂರು ಬಸ್ ಸ್ಟ್ಯಾಂಡ್ ನಲ್ಲಿ ಕುಳಿತಿದ್ದರು. ಈ ವೇಳೆ ಅಪರಿಚಿತ ಮಹಿಳೆಯೊಬ್ಬಳು ರಘು ಬಳಿ ಬಂದು ಮಗುವನ್ನ ಕೊಟ್ಟು ಶೌಚಾಲಯಕ್ಕೆ ಹೋಗುವುದಾಗಿ ಹೇಳಿ ನಾಪತ್ತೆಯಾಗಿದ್ದಾಳೆ.

ಮಗು ಕೊಟ್ಟ ಮಹಿಳೆ 2-3 ಗಂಟೆಯಾದ್ರೂ ವಾಪಸ್ ಬಾರದ ಹಿನ್ನೆಲೆ. ತನ್ನ ಬಸ್ ಬಂದ ಕಾರಣ ರಘು ಅವರು ಮಗು ಸಮೇತ ಮೈಸೂರಿಗೆ ಆಗಮಿಸಿದ್ದು, ಬಸ್ ನಿಂದ ಇಳಿದ ರಘು ಅವರು ಲಷ್ಕರ್ ಪೊಲೀಸರ ಮೊರೆ ಹೋಗಿದ್ದರು. ನಂತರ ಈ ಬಗ್ಗೆ ರಾಯಚೂರಿನ ಬಸ್ ಸ್ಟ್ಯಾಂಡ್ ವ್ಯಾಪ್ತಿಯ ಪೊಲೀಸರನ್ನ ಲಷ್ಕರ್ ಠಾಣಾ ಪೊಲೀಸರು ಸಂಪರ್ಕಿಸಿದ್ದು, ಮಹಿಳೆ ಮಾಹಿತಿ ಲಭ್ಯವಾಗಲಿಲ್ಲ. ಈ ಹಿನ್ನೆಲೆಯಲ್ಲಿ  ಲಷ್ಕರ್ ಠಾಣೆ ಪೊಲೀಸರು ಕಂದನನ್ನ ರಕ್ಷಿಸಿ ಮಾನವೀಯತೆ ಮೆರೆದಿದ್ದು ಇದೀಗ ಮಗು ಬಾಲಮಂದಿರದ ವಶಕ್ಕೆ ನೀಡಿದ್ದಾರೆ

ತಾಯಿಯಿಂದ ಬೇರ್ಪಟ್ಟ ಹಸುಕಂದನನ್ನ ಲಷ್ಕರ್ ಠಾಣಾ ಪೊಲೀಸರು ಆರೈಕೆ ಮಾಡಿ ನಂತರ ಬಾಲಮಂದಿರದ ವಶಕ್ಕೆ ನೀಡಿದ್ದಾರೆ.

Key words: woman -9 months-chid-mysore-raichur-police-protecting