ಮೈಸೂರು ಜಿಲ್ಲೆಯಲ್ಲಿ ಮಾರ್ಚ್‌ನಿಂದ ಈವರೆಗೆ 378 ಎಂಎಂ ಮಳೆ: 3.97 ಲಕ್ಷ ಹೆಕ್ಟೇರ್ ಬಿತ್ತನೆ ಗುರಿ- ಸಚಿವ ಹೆಚ್.ಸಿ ಮಹದೇವಪ್ಪ.

ಮೈಸೂರು,ಜುಲೈ,29,2023(www.justkannada.in): ಮೈಸೂರು ಜಿಲ್ಲೆಯಲ್ಲಿ ಮಾರ್ಚ್‌ನಿಂದ ಈವರೆಗೆ 378 ಎಂಎಂ ಮಳೆಯಾಗಿದೆ. ಮುಂಗಾರಿನಲ್ಲಿ  3.97 ಲಕ್ಷ ಹೆಕ್ಟೇರ್ ಬಿತ್ತನೆ ಗುರಿ ಹೊಂದಲಾಗಿದೆ ಎಂದು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಹೆಚ್.ಸಿ ಮಹದೇವಪ್ಪ ತಿಳಿಸಿದರು.

ಮುಂಗಾರು ಹಂಗಾಮಿನಲ್ಲಿ ಜಿಲ್ಲೆಯಲ್ಲಿ ಬಿತ್ತನೆ ಮತ್ತು ಕೃಷಿ ಚಟುವಟಿಕೆ ಪ್ರಕ್ರಿಯೆ ಕುರಿತು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಸಿ ಮಹಾದೇವಪ್ಪ, ಮೈಸೂರು ಜಿಲ್ಲೆಯಲ್ಲಿ ಮಳೆ ಸಾಧಾರಣ ಮಳೆ ಆಗಿದೆ. ಪೂರ್ವ ಮುಂಗಾರು ಮಳೆ  ಜಿಲ್ಲೆಯಲ್ಲಿ ವಾಡಿಕೆಗಿಂತ ಹೆಚ್ಚು ಬಿದ್ದಿದೆ. ವಾಡಿಕೆಯಂತೆ ಮಾರ್ಚ್ ನಿಂದ ಮೇ ವರೆಗೆ 198  ಮಿ.ಮೀ ಇತ್ತು. ಜೂನ್ 1ರಿಂದ ಜುಲೈ 27ರವರೆಗಿನ ಮುಂಗಾರು ಅವಧಿಯಲ್ಲಿ.‌165.5 ಎಂ.ಎಂ ಮಳೆ ಆಗಿದೆ.  ಅಂದರೆ ಜಿಲ್ಲೆಯಲ್ಲಿ 17.61 ಮಳೆ ಕೊರತೆ ಆಗಿದೆ. ಮಾರ್ಚ್‌ನಿಂದ ಇಲ್ಲಿಯವರೆಗೆ 378 ಎಂಎಂ ಮಳೆ ಆಗಿದೆ. ಮುಂಗಾರಿನಲ್ಲಿ 3.97 ಲಕ್ಷ ಹೆಕ್ಟೇರ್ ಬಿತ್ತನೆ ಗುರಿ ಹೊಂದಲಾಗಿದ್ದು ಈಗ 2.11 ಬಿತ್ತನೆ ಆಗಿದೆ ಎಂದು ಮಾಹಿತಿ ನೀಡಿದರು.

ದಸರಾ ಮಹೋತ್ಸವ ಈ ಬಾರಿ ಅದ್ಧೂರಿಯಾಗಿರುತ್ತಾ ಎಂಬ ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗೆ ಉತ್ತರಿಸಿದ ಜಿಲ್ಲಾ ಉಸ್ತುವಾರಿ ಸಚಿವ ಹೆಚ್.ಸಿ ಮಹದೇವಪ್ಪ, ಹಬ್ಬಕ್ಕೆ ನೆಂಟರಿಷ್ಟರನ್ನು ಕರೆದು ಅರ್ಧ ಊಟ ಮಾಡಿ ಎಂದು ಹೇಳಲು ಸಾಧ್ಯನಾ? ಕಷ್ಟವೋ ಸುಖವೋ ಮರಿಯಂತು ಹೊಡೆಯುತ್ತೇವೆ ಅಲ್ವಾ. ದಸರಾ ಮಹೋತ್ಸವವನ್ನೂ ಹಾಗೆ  ಎಲ್ಲರನ್ನು ಕರೆದು ಅದ್ದೂರಿಯಾಗಿಯೇ  ಮಾಡೋಣ. ಕೋವಿಡ್ ನಿಂದ ಜನ ತತ್ತರಿಸಿ ಹೋಗಿದ್ದರು. ಈಗ ಎಲ್ಲವೂ ಸುಭೀಕ್ಷವಾಗಿ ನಡೆಯುತ್ತಿದೆ. ಹೊಸ ಸರ್ಕಾರ ಬಂದಿದೆ, ಮಳೆಯಾಗಿದೆ. ಎಲ್ಲರೂ ಮನ ಬಿಚ್ಚಿ ಉತ್ತಮ ದಸರಾ ಮಾಡೋಣ. ಮೈಸೂರಿನ ಸಂಸ್ಕೃತಿ ಮಹರಾಜರ ಪರಂಪರೆ ಎಲ್ಲವನ್ನು ಉಳಿಸಿಕೊಂಡು ದಸರಾ ಮಾಡಬೇಕಿದೆ. ಇದೆಲ್ಲದರ ಬಗ್ಗೆ ದಸರಾ ಉನ್ನತ ಮಟ್ಟದ ಸಮಿತಿ ಸಭೆಯಲ್ಲಿ ತೀರ್ಮಾನ ಮಾಡಲಾಗುತ್ತೆ ಎಂದು ಸಚಿವ ಹೆಚ್.ಸಿ.ಮಹದೇವಪ್ಪ ಹೇಳಿದರು.

Key words: 378 mm- rain – Mysore district – March – 3.97 lakh -hectare – target – Minister- HC Mahadevappa.