ಕಾಯ್ಕಿಣಿ ಕಥೆ ‘ಹಾಲಿನ ಮೀಸೆ’ ದೃಶ್ಯ ರೂಪ ನೀಡಲು ಗಿರೀಶ್ ಕಾಸರವಳ್ಳಿ ಸಿದ್ಧತೆ

ಬೆಂಗಳೂರು, ಸೆಪ್ಟೆಂಬರ್ 04, 2019 (www.justkannada.in): ನಿರ್ದೇಶಕ ಗಿರೀಶ್ ಕಾಸರವಳ್ಳಿ 7 ವರ್ಷಗಳ ನಂತರ ಮತ್ತೆ ಆ್ಯಕ್ಷನ್ ಕಟ್ ಹೇಳಲು ಬರುತ್ತಿದ್ದಾರೆ.

ಜಯಂತ್ ಕಾಯ್ಕಿಣಿ ಬರೆದ ‘ಹಾಲಿನ ಮೀಸೆ’ ಕಥೆ ಆಧರಿಸಿ ಸಿನಿಮಾ ಮಾಡುವ ತಯಾರಿಯನ್ನು ಗಿರೀಶ್ ಕಾಸರವಳ್ಳಿ ಮಾಡಿಕೊಳ್ಳುತ್ತಿದ್ದಾರೆ.

ಸಿನಿಮಾಗೆ ಹೆಸರು ಸಹ ನಿರ್ಧಾರವಾಗಿದ್ದು, ‘ಇಲ್ಲಿರಲಾರೆ ಅಲ್ಲಿಗೂ ಹೋಗಲಾರೆ’ ಎಂದು ಶೀರ್ಷಿಕೆ ಇಡಲಾಗಿದೆ. ಗಿರೀಶ್ ಕಾಸರವಳ್ಳಿ ಹೊಸ ಸಿನಿಮಾಗೆ ಶಿವಕುಮಾರ ಬಂಡವಾಳ ಹಾಕುತ್ತಿದ್ದಾರೆ.