ರಾಜ್ಯ ಸರ್ಕಾರ ಎರಡು ಮೂರು ಜಿಲ್ಲೆಗಳಿಗೆ ಸೀಮಿತ ಅಲ್ಲ: ಬಿಜೆಪಿ ಪಾದಯಾತ್ರೆ ಗಿಮಿಕ್- ಸಿಎಂ ಹೆಚ್.ಡಿ ಕುಮಾರಸ್ವಾಮಿ ವಾಗ್ದಾಳಿ…

ರಾಯಚೂರು,ಜೂ,26,2019(www.justkannada.in): ರಾಜ್ಯ ಸರ್ಕಾರ ಕೇವಲ ಎರಡು ಮೂರು ಜಿಲ್ಲೆಗಳಿಗೆ ಸೀಮಿತವಾಗಿಲ್ಲ. ನಮ್ಮ ಸರ್ಕಾರದ ಬಗ್ಗೆ ಬಿಜೆಪಿ ಅಪಪ್ರಚಾರ ಮಾಡುತ್ತಿದೆ ಎಂದು ಸಿಎಂ ಹೆಚ್.ಡಿ ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.

ರಾಯಚೂರಿನಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಿಎಂ ಹೆಚ್.ಡಿ ಕುಮಾರಸ್ವಾಮಿ, ನಾವು ಸುಮ್ಮನೆ ಗ್ರಾಮವಾಸ್ತವ್ಯ ಮಾಡುತ್ತಿಲ್ಲ.ರಾಯಚೂರು ಜಿಲ್ಲೆಯ ಅಭಿವೃದ್ದಿ ಬಗ್ಗೆ ಜಿಲ್ಲೆಯ ಶಾಸಕರು ಎಂಎಲ್ ಸಿಗಳು ಮತ್ತು ಜಿಲ್ಲಾಧಿಕಾರಿ, ಸಿಇಒ ಜತೆ ಚರ್ಚಿಸಿದ್ದೇನೆ.  ಜಿಲ್ಲೆ ಅಭಿವೃದ್ದಿ ಬಗ್ಗೆ ಮಾಹಿತಿ ಪಡೆದಿದ್ದೇನೆ.  ಯಾವುದಕ್ಕೆ ಆದ್ಯತೆ ಕೊಡಬೇಕು ಅಂತ ಚರ್ಚಿಸಲಾಗಿದೆ. ಜಿಲ್ಲೆಯ ಅಭಿವೃದ್ದಿಗೆ ಕ್ಯಾಬಿನೆಟ್ ಮೀಟಿಂಗ್ ನಲ್ಲಿ 3ಸಾವಿರ ಕೋಟಿ ಬಿಡುಗಡೆಗೆ ಅನುಮತಿ ನೀಡಲಾಗಿದೆ ಎಂದರು.

ಬಿಜೆಪಿ ಶಾಸಕ ಶಿವನಗೌಡ ನಾಯಕ್ ದೇವದುರ್ಗದ ಅಭಿವೃದ್ದಿ ಬಗ್ಗೆ ಮಾತನಾಡ್ತಾರೆ. ಅವರ ಬಿಜೆಪಿ ಸರ್ಕಾರ ಇದ್ದಾಗ ಏನು ಮಾಡುತ್ತಿದ್ದರು. ಈಗ ಪಾದಯಾತ್ರೆ ಮಾಡುತ್ತಿದ್ದಾರೆ. ದಂಡು ಕಟ್ಟಿಕೊಂಡು ಯುದ್ದ ಮಾಡಲು ಬರ್ತಿದ್ದಾರಾ.? ಅವರ ಪಾದಯಾತ್ರೆ ಕೇವಲ ಗಿಮಿಕ್ ಎಂದು ಸಿಎಂ ಹೆಚ್.ಡಿ ಕುಮಾರಸ್ವಾಮಿ ಟೀಕಿಸಿದರು.

ಗ್ರಾಮವಾಸ್ತವ್ಯದ ಬಗ್ಗೆ ಕಲಾಪದಲ್ಲಿ ಉತ್ತರ ನೀಡುತ್ತೇನೆ.ರಾಜ್ಯ ಸರ್ಕಾರ ಕೇವಲ ಎರಡು ಮೂರು ಜಿಲ್ಲೆಗಳಿಗೆ ಸೀಮಿತವಾಗಿಲ್ಲ. ಬಿಎಸ್ ಯಡಿಯೂರಪ್ಪ ಅವರ ಕ್ಷೇತ್ರ ಶಿವಮೊಗ್ಗಕ್ಕೆ ನೀರಾವರಿಗಾಗಿ  500 ಕೋಟಿ ಅನುದಾನ ನೀಡಿದ್ದೇನೆ. ಬಿಎಸ್ ವೈ ಅಧಿಕಾರದಲ್ಲಿದ್ದಾಗ ರಾಮನಗರಕ್ಕೆ ಅನುದಾನ ನೀಡಿದ್ದರಾ..? ಎಂದು ಪ್ರಶ್ನಿಸಿದರು.

Key words: state government -not limited -two -r three -districts: – CM HD Kumaraswamy