ಸಿಲಿಂಡರ್ ಸ್ಪೋಟ: 7 ಮಂದಿಗೆ ಗಾಯ.

ಬೆಂಗಳೂರು,ನವೆಂಬರ್,6,2021(www.justkannada.in):  ಸಿಲಿಂಡರ್ ಸ್ಪೋಟಗೊಂಡು 7ಮಂದಿಗೆ ಗಾಯಗಳಾಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ನಗರದ ಅನೇಕಲ್ ತಾಲ್ಲೂಕಿ ನ ಜಿಗಣಿಯಲ್ಲಿ ಈ ಘಟನೆ ನಡೆದಿದೆ. ಉತ್ತರ ಭಾರತ ಮೂಲದ 7 ಮಂದಿಗೆ ಗಾಯಗಳಾಗಿದೆ. ಪ್ರಕಾಶ್, ಜಗದೀಶ್ ,ಕಾಡು, ಜೈಮುಲ್, ಮಂಜುಗೆ ಗಾಯಗಳಾಗಿದ್ದು ಜಿಗಣಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. cylinder-explosion-three-boy-serious-injuries-magadi

ಮಂಜುನಾಥ ರೆಡ್ಡಿ ಎಂಬುವವರಿಗೆ ಸೇರಿದ ಮನೆಯಲ್ಲಿ ಇಂದು ಬೆಳಿಗ್ಗೆ ಸಿಲಿಂಡರ್ ಸ್ಪೋಟಗೊಂಡು ಮನೆ ಹೊತ್ತಿ ಉರಿದಿದೆ. ಈ ವೇಳೆ ಮನೆಯಲ್ಲಿದ್ದ 7 ಕಾರ್ಮಿಕರಿಗೆ ಗಾಯಗಳಾಗಿದೆ.

Key words: Cylinder -explosion -7 injured