ಚಿತ್ರವಾಗಲಿದೆ ಸರಿಗಮಪ ಹನುಮಂತನ ಜೀವನದ ಕಥೆ

ಬೆಂಗಳೂರು, ಮೇ 20, 2019 (www.justkannada.in): ಜೀ ಕನ್ನಡದಲ್ಲಿ ಪ್ರಸಾರವಾಗುವ ರಿಯಾಲಿಟಿ ಶೋ ಸರಿಗಮಪ ಸೀಸನ್ 15 ರಲ್ಲಿ ರನ್ನರ್ ಅಪ್ ಆಗಿದ್ದ ಹನುಮಂತನ ಕಥೆ ಸಿನಿಮಾ ರೂಪದಲ್ಲಿ ಮೂಡಿ ಬರಲಿದೆ.

ಹನುಮಂತು ಜೀವನಾಧಾರ ಕಥೆಯನ್ನು ಸಿನಿಮಾ ಮಾಡಲು ‘ಕತ್ತಲ ಕೋಣೆ’ ಚಿತ್ರದ ನಿರ್ದೇಶಕ ಸಂದೇಶ ಶೆಟ್ಟಿ ಮುಂದಾಗಿದ್ದಾರೆ. ಈಗಾಗಲೇ ಈ ಬಗ್ಗೆ ಹನುಮಂತನ ಬಳಿಯೂ ಒಂದು ಸುತ್ತಿನ ಮಾತುಕತೆ ಆಗಿದೆಯಂತೆ.

ವಿಶೇಷ ಅಂದರೆ ಈ ಚಿತ್ರವನ್ನು ಇಸ್ರೇಲ್ ಮೂಲದ ವ್ಯಕ್ತಿಯೊಬ್ಬರು ನಿರ್ಮಿಸಲು ತಯಾರಾಗಿದ್ದಾರೆ. ಹನುಮಂತನ ಪಾತ್ರವನ್ನು ಯಾರು ಮಾಡಲಿದ್ದಾರೆ ಎಂಬುದು ಕುತೂಹಲ ಮೂಡಿತ್ತಿದೆ. ಮಳೆಗಾಲ ಮುಗಿದ ಕೂಡಲೇ ಶೂಟಿಂಗ್ ಶುರುವಾಗಲಿದೆ.