ಹೆಚ್.ಡಿಕೆ ಭೇಟಿಗೆ ಆಕ್ಷೇಪವಿಲ್ಲ: ನಾಳೆ ಮಂಡ್ಯದಲ್ಲೇ ನನ್ನ ನಿಲುವು ಘೋಷಣೆ- ಸಂಸದೆ ಸುಮಲತಾ ಅಂಬರೀಶ್.

ಬೆಂಗಳೂರು,ಮಾರ್ಚ್,29,2024 (www.justkannada.in): ನಾಳೆ ಬೆಂಬಲಿಗರು ಮುಖಂಡರ ಜೊತೆ ಸಭೆ ನಡೆಸಿ ಚರ್ಚಿಸಿ ಮಂಡ್ಯದಲ್ಲೇ ನನ್ನ ನಿಲುವು ಘೋಷಣೆ ಮಾಡುತ್ತೇನೆ ಎಂದು ಸಂಸದೆ ಸುಮಲತಾ ಅಂಬರೀಶ್ ತಿಳಿಸಿದರು.

ಇಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಭೇಟಿ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಸಂಸದೆ ಸುಮಲತಾ ಅಂಬರೀಶ್, ನಾಳೆ  ಬೆಂಬಲಿಗರು ಮುಖಂಡರ  ಜೊತೆ ಸಭೆ ನಡೆಸುತ್ತೇನೆ. ಅಭಿಪ್ರಾಯ ಕೇಳುತ್ತೇನೆ. ನನ್ನ ನಿಲುವನ್ನ ಮಂಡ್ಯದಲ್ಲೇ ತಿಳಿಸಲು ಇಷ್ಟಪಡುತ್ತೇನೆ ಎಂದು ತಿಳಿಸಿದರು.

ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಭೇಟಿ ಕುರಿತು ಪ್ರತಿಕ್ರಿಯಿಸಿದ ಸುಮಲತಾ ಅಂಬರೀಶ್, ಕುಮಾರಸ್ವಾಮಿ ಅವರು ಭೇಟಿ ಮಾಡಿದ್ರೆ ಯಾವುದೇ ಆಕ್ಷೇಪವಿಲ್ಲ. ಇದು ಅಂಬರೀಶ್ ಅವರ ಮನೆ ಯಾರೇ ಬಂದ್ರೂ ಸ್ವಾಗತ ಎಂದರು.

ಹಾಗೆಯೇ ನಾನು ಮಂಡ್ಯ ಬಿಟ್ಟು ಬೇರೆಲ್ಲೂ ಸ್ಪರ್ಧಿಸಲ್ಲ. ಮಂಡ್ಯ ಕ್ಷೇತ್ರ ಬಿಟ್ಟು ಹೋಗುತ್ತೇನೆ ಎಂದು ಹೇಳಿಲ್ಲ ಎಂದು ಸುಮಲತಾ ಅವರು ತಿಳಿಸಿದರು.

Key words:  Mandya, MP, Sumalatha Ambarish