ಮಹಿಳೆ ಬಿಟ್ಟು ಹನಿಟ್ರ್ಯಾಪ್ ಮಾಡಲಾಗಿದೆ : ಬಾಲಚಂದ್ರ ಜಾರಕಿಹೊಳಿ

ಬೆಂಗಳೂರು,ಮಾರ್ಚ್,07,2021(www.justkannada.in) : ರಮೇಶ್ ಜಾರಕಿಹೊಳಿ ರಾಜಿನಾಮೆ ಕೊಡಿಸುವ ಉದ್ದೇಶದಿಂದ ಮಹಿಳೆ ಬಿಟ್ಟು ಹನಿಟ್ರ್ಯಾಪ್ ಮಾಡಲಾಗಿದೆ. ಉನ್ನತ ಮೂಲಗಳ ಪ್ರಕಾರ ಮಾಹಿತಿ ಬಂದಿದೆ. ಆ ಮಹಿಳೆಯ ಹಿಂದೆ ನಾಲ್ವರ ಕೈವಾಡವಿದೆ ಎಂದು ರಮೇಶ್ ಜಾರಕಿಹೊಳಿ ಸಹೋದರ ಬಾಲಚಂದ್ರ ಜಾರಕಿಹೊಳಿ ಹೇಳಿದರು.

jk

ದಿನೇಶ್ ಕಲ್ಲಹಳ್ಳಿ ಅವರು ದೂರು ಹಿಂಪಡೆದ ಕುರಿತು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, 15 ಕೋಟಿ ರೂ. ಖರ್ಚು ಮಾಡಿ ಈ ವಿಡಿಯೋ ಮಾಡಲಾಗಿದೆ. ಆ ಹುಡುಗಿಯನ್ನು ಸಂತ್ರಸ್ತ ಮಹಿಳೆ ಎಂದು ಕರೆಯಬೇಡಿ ಎಂದಿದ್ದಾರೆ.

ದಿನೇಶ್ ಕಲ್ಲಹಳ್ಳಿ ಅವರನ್ನು ಮಿಸ್ ಗೈಡ್ ಮಾಡಿದ್ದಾರೆ. ಯುವತಿಗೆ ದುಬೈನ್ ನಲ್ಲಿ ಕೆಲಸ ಕೊಡಿಸುವ ಆಮಿಷವೊಡ್ಡಿದ್ದಾರೆ.  ರಷ್ಯಾದಲ್ಲಿ ಸರ್ವರ್ ಬುಕ್ ಮಾಡಿ ಸಿಡಿ ಬಿಡುಗಡೆ ಮಾಡಿದ್ದು, ಬಾರಿ ಷಡ್ಯಂತ್ರ ನಡೆಸಲಾಗಿದೆ ಎಂದು ಆರೋಪಿಸಿದರು.

woman,Leave,Honeytrap,Has been,Balachandra Zarakiholi

ಬಿಜೆಪಿಗೆ ಕೆಟ್ಟ ಹೆಸರು ತರಲು ಹೀಗೆ ಮಾಡಲಾಗಿದೆ. ಮಹಿಳೆ ಮತ್ತು ಇತರರ ಮೇಲೆ ದೂರು ದಾಖಲಿಸಿಲು ಮನವಿ. ಅದು ನಕಲಿ ವಿಡಿಯೋ ಅಂತ ಹೇಳುತ್ತೇನೆ. 100% ಆ ವಿಡಿಯೋ ಫೇಕ್ ಎಂದು ತಿಳಿಸಿದ್ದಾರೆ.

key words : woman-Leave-Honeytrap-Has been-Balachandra Zarakiholi