ವಿನಯ್ ಕುಲಕರ್ಣಿಯನ್ನ ಸಿಬಿಐ ವಶಕ್ಕೆ ಪಡೆದಿರುವುದನ್ನ ಸ್ವಾಗತಿಸುವೆ- ಸಚಿವ ಕೆ.ಎಸ್ ಈಶ್ವರಪ್ಪ..

ಮಂಗಳೂರು,ನವೆಂಬರ್,5,2020(www.justkannada.in): ಯೋಗೇಶ್ ಗೌಡ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ವಿನಯ್ ಕುಲಕರ್ಣಿ ಅವರನ್ನು ಸಿಬಿಐ ವಶಕ್ಕೆ ಪಡೆದಿದ್ದು ಈ ಕುರಿತು ಪ್ರತಿಕ್ರಿಯಿಸಿರುವ ಸಚಿವ ಕೆ.ಎಸ್ ಈಶ್ವರಪ್ಪವಿನಯ್ ಕುಲಕರ್ಣಿಯನ್ನ ಸಿಬಿಐ ವಶಕ್ಕೆ ಪಡೆದಿರುವುದನ್ನ ಸ್ವಾಗತಿಸುವೆ ಎಂದಿದ್ದಾರೆ.

ಮಂಗಳೂರಿನಲ್ಲಿ ಇಂದು ಮಾತನಾಡಿದ ಸಚಿವ ಕೆ.ಎಸ್ ಈಶ್ವರಪ್ಪ,  ಒಂದು ಕಾಲದಲ್ಲಿ ಹಲವಾರು ಜನ ರಾಜಕಾರಣ ಪ್ರಭಾವ ಬೀರಿ ಕೊಲೆ ಸುಲಿಗೆ ಅತ್ಯಾಚಾರ ನಡೆಸಿದರು. ಅದ್ರೆ ಯಾವಾಗಲೂ ಅದೇ ಸರ್ಕಾರ ಇರುತ್ತೆ ಎನ್ನಲಾಗಲ್ಲ. ಯೋಗೇಶ್ ಹತ್ಯೆ ಪ್ರಕರಣದ ತನಿಖೆಯನ್ನ ಸಿಬಿಐ ಮಾಡುತ್ತಿದೆ.vinay-kulkarni-cbi-custody-minister-ks-eshwarappa

ವಿನಯ್ ಕುಲಕರ್ಣಿ ನಿರ್ದೋಷಿಯಾಗಿ ಹೊರಬಂದರೇ ಸಂತೋಷ. ಅವರನ್ನ ಯಾವುದೇ ಕಾರಣಕ್ಕೂ ಬಿಜೆಪಿಗೆ ಸೇರಿಸಿಕೊಳ್ಳುವುದಿಲ್ಲ ಎಂದು  ಸಚಿವ ಕೆ.ಎಸ್ ಈಶ್ವರಪ್ಪ   ಹೇಳಿದರು.

Key words: Vinay Kulkarni- CBI -custody – Minister -KS Eshwarappa