ನಮ್ಮ‌ಕ್ಷೇತ್ರದ ವಿಚಾರದಲ್ಲಿ ಜಿಲ್ಲಾಧಿಕಾರಿಯಿಂದ ಎಲ್ಲಾ ರೀತಿಯ ಸಹಕಾರ- ಶಾಸಕ ಎಲ್ ನಾಗೇಂದ್ರ ಪ್ರತಿಕ್ರಿಯೆ..

ಮೈಸೂರು,ನವೆಂಬರ್,28,2020(www.justkannada.in):  ಮೈಸೂರು ಜಿಲ್ಲಾಧಿಕಾರಿ  ರೋಹಿಣಿ ಸಿಂಧೂರಿ ಮತ್ತು ಶಾಸಕರಾದ ಹೆಚ್.ಪಿ ಮಂಜುನಾಥ್, ಸಾ.ರಾ ಮಹೇಶ್ ನಡುವಿನ ಜಟಾಪಟಿ ಸಂಬಂಧ ಶಾಸಕ ಎಲ್ ನಾಗೇಂದ್ರ ಕೆಲ ಸಲಹೆ ನೀಡಿದ್ದಾರೆ.

ಕೆಲವು ಸಂದರ್ಭಗಳಲ್ಲಿ ಸಣ್ಣಪುಟ್ಟ ವ್ಯತ್ಯಾಸಗಳು ಸಹಜ. ಸಮನ್ವಯದ ಕೊರತೆ ಇದ್ದರೆ ಮಾತುಕತೆ ಮುಖಾಂತರ ಸಮಸ್ಯೆ ಬಗೆಹರಿಸಿಕೊಳ್ಳಲಿ ಎಂದು ಶಾಸಕ ಎಲ್. ನಾಗೇಂದ್ರ ತಿಳಿಸಿದ್ದಾರೆ.I didn't knew CM BSY will think so cheaply - KPCC President D.K. Shivakumar

ಮೈಸೂರಿನಲ್ಲಿ ಇಂದು ಮಾತನಾಡಿದ ಶಾಸಕ ನಾಗೇಂದ್ರ, ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ದಕ್ಷ ಮತ್ತು ಪ್ರಾಮಾಣಿಕ ಅಧಿಕಾರಿ. ಕೆಲವು ಸಂದರ್ಭಗಳಲ್ಲಿ ಸಣ್ಣಪುಟ್ಟ ವ್ಯತ್ಯಾಸಗಳು ಸಹಜ. ಆಡಳಿತಾತ್ಮಕ ವಿಚಾರದಲ್ಲಿ ಜನಪ್ರತಿನಿಧಿಗಳು, ಅಧಿಕಾರಿಗಳು ಸಮನ್ಚಯದಿಂದ ಕೆಲಸ ಮಾಡುವ ಅಗತ್ಯತೆ ಇದೆ. ಕೋವಿಡ್ ಸಂದರ್ಭದಲ್ಲಿ ಪಿಪಿಇ ಕಿಟ್  ಧರಿಸಿ ರೋಗಿಗಳನ್ನ ಭೇಟಿ ಮಾಡಿ ಸಮಾಲೋಚನೆ ನಡೆಸಿದ್ದಾರೆ. ಸಮನ್ವಯದ ಕೊರತೆ ಇದ್ದರೆ ಮಾತುಕತೆ ಮುಖಾಂತರ ಸಮಸ್ಯೆ ಬಗೆಹರಿಸಿಕೊಳ್ಳಲಿ ಎಂದರು.mysore-dc-rohini-sinduri-mlas-mla-l-nagendra

ಸಾ ರಾ ಮಹೇಶ್ ಕೂಡ ಸಚಿವಾರಾಗಿದ್ದಂತವರು. ಜಿಲ್ಲಾಧಿಕಾರಿಗಳೂ ಕೂಡ ಜನಪ್ರತಿನಿಧಿಗಳೊಂದಿಗೆ ಸಮನ್ವಯತೆಯಿಂದ ವರ್ತಿಸುವ ಅವಶ್ಯಕ. ನಮ್ಮ‌ಕ್ಷೇತ್ರದ ವಿಚಾರದಲ್ಲಿ ಜಿಲ್ಲಾಧಿಕಾರಿ ಎಲ್ಲಾ ಸಹಕಾರ ನೀಡುತ್ತಿದ್ದಾರೆ. ಜನಪ್ರತಿನಿಧಿಗಳ ಸಭೆ ನಡೆಸಿ ಸಮಸ್ಯೆ ಬಗಹರಿಸಿಕೊಳ್ಳಲಿ ಎಂದು ಶಾಸಕ ನಾಗೇಂದ್ರ ತಿಳಿಸಿದರು.

Key words: Mysore-DC- rohini sinduri-MLAs- MLA- L. Nagendra