ನಾಳೆಯಿಂದ ಕ್ಯಾಪ್ಟನ್ ಅಭಿಮನ್ಯುವಿಗೆ ಮರದ ಅಂಬಾರಿ ಹೊರಿಸಿ ತಾಲೀಮು…

ಮೈಸೂರು,ಅಕ್ಟೋಬರ್,13,2020(www.justkannada.in): ಕೊರೋನಾ ಸಂಕಷ್ಟದ ನಡುವೆ ನಾಡಹಬ್ಬ ಮೈಸೂರು ದಸರಾ ಮಹೋತ್ಸವಕ್ಕೆ ಸಾಂಸ್ಕೃತಿಕ ನಗರಿಯಲ್ಲಿ ಸಕಲ ಸಿದ್ದತೆ ಸಾಗುತ್ತಿದ್ದು ಈ ಮಧ್ಯೆ ಅರಮನೆ ಅಂಗಳದಲ್ಲಿ ದಸರಾ ಆನೆಗಳಿಗೆ ತಾಲೀಮು ಮುಂದುವರೆದಿದೆ.

ಈ ಬಾರಿ ಅಂಬಾರಿ ಹೊರುವ ಕ್ಯಾಪ್ಟನ್ ಅಭಿಮನ್ಯು ಹಾಗೂ ಇತರೇ ಆನೆಗಳಿಗೆ ಇಂದು ಮರಳು ಭಾರ ಹೊರಿಸಿ ತಾಲೀಮು ನಡೆಸಲಾಯಿತು. ಕ್ಯಾಪ್ಟನ್ ಅಭಿಮನ್ಯು ನೇತೃತ್ವದ ಗಜಪಡೆ ಮರಳು ಮೂಟೆ  ಹೊತ್ತು ಸಾಗುವ ಮೂಲಕ ತಾಲೀಮಿನಲ್ಲಿ ಭಾಗಿಯಾಗಿದ್ದವು.mysore-dasara-workout-abhimanyu-team-tree-ambary-tomorrow

ದಸರಾ ಆನೆ ಗೋಪಿಗೆ ಮರಳು ಮೂಟೆ ತಾಲೀಮು ಇಂದಿಗೆ ಅಂತ್ಯವಾಗಿದೆ. ಇನ್ನು ನಾಳೆಯಿಂದ ಕ್ಯಾಪ್ಟನ್  ಅಭಿಮನ್ಯು ಆನೆಗೆ ಮರದ ಅಂಬಾರಿ ಹೊರಿಸಿ ತಾಲೀಮು ನಡೆಸಲಾಗುತ್ತದೆ. ಅಭಿಮನ್ಯು ಸೇರಿ ಗೋಪಿ, ವಿಕ್ರಮನಿಗೂ ಮರದ‌ ಅಂಬಾರಿ ಹೊರಿಸಿ  ತಾಲೀಮು ನಡೆಸಲಾಗುತ್ತದೆ.

Key words: mysore dasara- Workout – Abhimanyu – team- tree ambary- tomorrow.