ರಾಜ್ಯದಲ್ಲಿ ಹೋಟೆಲ್ ಪುನಾರಂಭ ವಿಚಾರ: ಸಿಹಿಸುದ್ದಿ ನೀಡಿದ ಸಚಿವ ಆರ್. ಅಶೋಕ್…

ಬೆಂಗಳೂರು,ಮಾ,28,2020(www.justkannada.in) ಮಾರಣಾಂತಿಕ ಕೊರೋನಾ ವೈರಸ್ ನಿಂದಾಗಿ ಲಾಕ್ ಡೌನ್ ಘೋಷಣೆ ಮಾಡಿದ್ದ ಹಿನ್ನೆಲೆ ಬಂದ್ ಮಾಡಲಾಗಿದ್ದ ಹೋಟೆಲ್ ಗಳನ್ನ ಪುನಾರಂಭ ಮಾಡುವ ಕುರಿತು ಕಂದಾಯ ಸಚಿವ ಆರ್.ಅಶೋಕ್ ಸಿಹಿಸುದ್ದಿ ನೀಡಿದ್ದಾರೆ.

ಈ ಕುರಿತು ಬೆಂಗಳೂರಿನಲ್ಲಿ ಮಾಧ್ಯಮದವರ ಜತೆ ಮಾತನಾಡಿದ ಸಚಿವ ಆರ್.ಅಶೋಕ್, ಹೋಟೆಲ್ ಓಪನ್  ಮಾಡಲು ಅವಕಾಶ ಕೊಡುತ್ತೇವೆ. ಹೋಟೆಲ್ ಪುನಾರಂಭ ವಿಚಾರವಾಗಿ ಸರ್ಕಾರಕ್ಕೆ ಮುಕ್ತ ಮನಸ್ಸಿದೆ. ಜೂನ್ 1 ರ ನಂತರ ಕೇಂದ್ರದ ಗೈಡ್ ಲೈನ್ ನೋಡಿ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ ಎಂದು ತಿಳಿಸಿದರು.

.ಹಾಗೆಯೇ ಬಾರ್ ಅಂಡ್ ರೆಸ್ಟೋರೆಂಟ್ ಮತ್ತು  ಜಿಮ್ ತೆರೆಯಲು ಅವಕಾಶ  ನೀಡುವುದಿಲ್ಲ ಎಂದು ಸಚಿವ ಆರ್.ಅಶೋಕ್ ಸ್ಪಷ್ಟನೆ ನೀಡಿದರು.

Key words: minister- R.Ashok- hotel- re-open-good news