ಬಿ.ಸಿ ಪಾಟೀಲ್ ಗೆ ತಿರುಗೇಟು: ಬಿಜೆಪಿಯಿಂದ ಬೈ ಎಲೆಕ್ಷನ್ ಗೆ ಕೋಟ್ಯಾಂತರ ಹಣ ಖರ್ಚು-ಮಾಜಿ ಸಿಎಂ ಸಿದ್ದರಾಮಯ್ಯ ಆರೋಪ….

ದಾವಣಗೆರೆ,ನ,27,2019(www.justkannada.in):  ಬೈ ಎಲೆಕ್ಷನ್ ಗಾಗಿ ಬಿಜೆಪಿ ಕೋಟ್ಯಾಂತರ ರೂ ಖರ್ಚು ಮಾಡುತ್ತಿದೆ.  ಹಣ ಅಧಿಕಾರದ ಆಮಿಷ ಒಡ್ಡಿ ಚುನಾವಣೆ ನಡೆಸುತ್ತಿದೆ ಎಂದು ಮಾಜಿ ಸಿಎಂ ಸಿದ್ಧರಾಮಯ್ಯ ಗಂಭೀರ ಆರೋಪ ಮಾಡಿದರು.

ದಾವಣಗೆರೆಯಲ್ಲಿ ಇಂದು ಮಾತನಾಡಿದ ಸಿದ್ಧರಾಮಯ್ಯ,  ಬಿಜೆಪಿ ಅಭ್ಯರ್ಥಿಗಳಿಗೆ ಸಚಿವ ಸ್ಥಾನ ನೀಡುವುದಾಗಿ ಹೇಳ್ತಾರೆ. ಹಣ ಅಧಿಕಾರದ ಆಮಿಷ ತೋರಿ ಚುನಾವಣೆ ನಡೆಸುತ್ತಿದ್ದಾರೆ. ಈ ಬಗ್ಗೆ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದೇವೆ. ಚುನಾವಣಾ ಆಯೋಗ ಬಿಜೆಪಿ ಕೈಗೊಂಬೆಯಾಗಿದೆ. ಈಗ ಮಹಾರಾಷ್ಟ್ರದ ಪರಿಸ್ಥಿತಿ ಏನಾಗಿದೆ ಎಂದು ಗೊತ್ತು.  ಇದೆಲ್ಲಾ ಕೇಂದ್ರ ಬಿಜೆಪಿ ಸರ್ಕಾರ ಮಾಡಿಸುತ್ತಿದೆ ಎಂದು ಹರಿಹಾಯ್ದರು.

ಇದೇ ವೇಳೆ ಬಿಜೆಪಿ ಅಭ್ಯರ್ಥಿ ಬಿ.ಸಿ ಪಾಟೀಲ್ ವಿರುದ್ದ ವಾಗ್ದಾಳಿ ನಡೆಸಿದ ಸಿದ್ಧರಾಮಯ್ಯ, ನಾನು ಜೆಡಿಎಸ್ ಬಿಡಲಿಲ್ಲ. ಅವರೇ ನನ್ನನ್ನ ಉಚ್ಛಾಟನೆ ಮಾಡಿದರು. ಒಂದು ವರ್ಷದ ನಂತರ ನಾನು ಕಾಂಗ್ರೆಸ್ ಗೆ ಸೇರ್ಪಡೆಯಾದೆ. ನಾನು ಬಿ.ಸಿ ಪಾಟೀಲ್ ರೀತಿ ಹಣ ಅಧಿಕಾರದ ಆಸೆಗೆ ಪಕ್ಷಾಂತರ ಮಾಡಲಿಲ್ಲ. ಇದು ಬಿ.ಸಿ ಪಾಟೀಲ್ ಗೆ ಗೊತ್ತಿಲ್ಲ ಎಂದು ಲೇವಡಿ ಮಾಡಿದರು.

ಹಾಗೆಯೇ ನನ್ನನ್ನ ಕಂಡರೇ ಬಿಜೆಪಿ ಮತ್ತು ಜೆಡಿಎಸ್ ಗೆ ಭಯ ಇರಬೇಕು. ಕಾಂಗ್ರೆಸ್ ಗೆಲ್ಲುತ್ತೆ ಎಂಬ ಭಯ ಎಂದು ಸಿದ್ಧರಾಮಯ್ಯ ಟಾಂಗ್ ನೀಡಿದರು.

Key words: davanagere-former cm –siddaramaiah-outrage-bjp