ಆರ್’ಸಿಬಿ ಕುರಿತು ಕಿಚ್ಚನ ಮಾತು!

ಬೆಂಗಳೂರು, ಏಪ್ರಿಲ್ 19, 2021 (www.justkannada.in): ನಟ ಕಿಚ್ಚ ಸುದೀಪ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಕುರಿತು ಮಾತನಾಡಿದ್ದಾರೆ.

ಹ್ಯಾಟ್ರಿಕ್ ಗೆಲುವು ಸಾಧಿಸಿರುವ ಆರ್ ಸಿಬಿಗೆ ಅಭಿನಂದನೆ ಸಲ್ಲಿಸಿದ್ದಾರೆ. ಮೂರು ಪಂದ್ಯಗಳಲ್ಲಿ ಮೂರೂ ಗೆಲುವು. ಹೀಗೇ ಮುಂದುವರಿಯಲಿ. ಈಗಾಗಲೇ ಗಟ್ಟಿ ಫೌಂಡೇಷನ್ ಹಾಕಿದ್ದೀರಿ ಎಂದು ಕಿಚ್ಚ ಟ್ವೀಟ್ ಮಾಡಿದ್ದಾರೆ.

ಇದನ್ನೇ ಪಂದ್ಯಗಳಿಗೆ ಇದನ್ನೇ ಮುಂದುವರಿಸಿಕೊಂಡು ನಾಕೌಟ್ ಹಂತಕ್ಕೆ ತಲುಪಬೇಕು ಎಂದಿರುವ ಕಿಚ್ಚ ಮುಂದಿನ ಪಂದ್ಯಗಳಿಗೆ ಬೆಸ್ಟ್ ಆಫ್ ಲಕ್ ಹೇಳಿದ್ದಾರೆ.

ಅಂದಹಾಗೆ ರಾಯಲ್ ಚಾಲೆಂಜರ್ಸ್ ಮೂರು ಪಂದ್ಯಗಳ ಪೈಕಿ ಮೂರನ್ನೂ ಗೆದ್ದು ಅಂಕಪಟ್ಟಿಯಲ್ಲಿ ಟಾಪ್’ನಲ್ಲಿದೆ.