Thursday, August 13, 2026

BDA Apartments

Home Front Page HDK ನನ್ನ ಬಳಿ ಸಹಾಯ ಪಡೆದಿದ್ದಾರೆ: ಬೇಕಿದ್ರೆ ಬಹಿರಂಗ ಚರ್ಚೆಗೆ ಬರಲಿ- ಶಾಸಕ ಕದಲೂರು ಉದಯ್

HDK ನನ್ನ ಬಳಿ ಸಹಾಯ ಪಡೆದಿದ್ದಾರೆ: ಬೇಕಿದ್ರೆ ಬಹಿರಂಗ ಚರ್ಚೆಗೆ ಬರಲಿ- ಶಾಸಕ ಕದಲೂರು ಉದಯ್

ಮಂಡ್ಯ,ಜೂನ್,30,2026 (www.justkannada.in):  ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ನನ್ನ ಬಳಿ ಸಹಾಯ ಪಡೆದಿದ್ದಾರೆ. ಈ ವಿಚಾರದ ಬಗ್ಗೆ ಬೇಕಾದರೇ ಬಹಿರಂಗ ಚರ್ಚೆಗೆ ಬರಲಿ ಎಂದು ಕಾಂಗ್ರೆಸ್ ಶಾಸಕ ಕದಲೂರು ಉದಯ್ ಹೇಳಿದ್ದಾರೆ.

ಮಂಡ್ಯ ಜಿಲ್ಲೆ ಗೆಜ್ಜಲಗೆರೆಯಲ್ಲಿ ಮಾತನಾಡಿದ ಕದಲೂರು ಉದಯ್, ಕೇಂದ್ರ ಸಚಿವ ಹೆಚ್ ಡಿಕೆ ನನ್ನ ಬಳಿ ಸಹಾಯ ಪಡೆದಿದ್ದಾರೆ. ನನ್ನ ಬಳಿ ಸಾಕಷ್ಟು ನಾಯಕರು ಸಹಾಯ ಪಡೆದಿದ್ದಾರೆ. ಹೆಚ್ ಡಿಕೆ ಸೇರಿ ಅನೇಕರು ಸಹಾಯ ಪಡೆದಿದ್ದಾರೆ.  ಈ ವಿಚಾರದ ಬಗ್ಗೆ ಬೇಕಾದರೇ ಬಹಿರಂಗ ಚರ್ಚೆಗೆ ಬರಲಿ ಎಂದರು.

ಇಲ್ಲಿಗೆ ಬಂದು ಪ್ರಚೋದನಕಾರಿಯಾಗಿ ಮಾತನಾಡಿದ್ದಾರೆ. ಅವರೆಲ್ಲಾ ನನ್ನ ಬಳಿ ಸಹಾಯ ಪಡೆದವರೇ.  ಕೆಲವರು ರಾಜಕೀಯ ಉದ್ದೇಶದಿಂದ ಭಾಷಣ ಮಾಡಿ ಹೋಗುತ್ತಾರೆ. ಅದು ಅಷ್ಟಕ್ಕೆ ಸೀಮಿತ ಆಗಿರುತ್ತದೆ.  ನಾನು ಹಿಂದೆಯೇ ಪ್ರತಿಭಟನಾ ಸ್ಥಳಕ್ಕೆ ಬರಬೇಕು ಅಂದುಕೊಂಡಿದ್ದೆ. ಇಲ್ಲಿಗೆ ಬಂದವರು ನನ್ನನ್ನು ಬೇರೆ ರೀತಿಯಾಗಿ ಬಿಂಬಿಸಿದರು. ಹೀಗಾಗಿ ನನಗೆ ಬೇಸರ ಆಯಿತು ಬರಲಿಲ್ಲ ಎಂದರು.

Key words: HDK, help, open debate, MLA Kadalur Uday