ನೀಟ್ ಅಕ್ರಮ: ನಮ್ಮ ಸರ್ಕಾರ ವಿದ್ಯಾರ್ಥಿಗಳ ಜೊತೆ ಸೂಕ್ಷ್ಮತೆಯಿಂದ ವರ್ತಿಸುತ್ತಿದೆ- ಕೇಂದ್ರ ಸಿಚಿವ ಕಿರಣ್ ರಿಜಿಜು

ನವದೆಹಲಿ,ಜುಲೈ,21,2026 (www.justkannada.in):  ನೀಟ್ ಅಕ್ರಮಕ್ಕೆ ಸಂಬಂಧಿಸಿದತೆ ನಮ್ಮ ಕೇಂದ್ರ ಸರ್ಕಾರ ವಿದ್ಯಾರ್ಥಿಗಳ ಜೊತೆ ಸೂಕ್ಷ್ಮತೆಯಿಂದ ವರ್ತಿಸುತ್ತಿದೆ ಎಂದು ಕೇಂದ್ರ ಸಿಚಿವ ಕಿರಣ್ ರಿಜಿಜು ತಿಳಿಸಿದ್ದಾರೆ.

ಎನ್ ಡಿಎ ಸಭೆ ಬಳೀಕ ಮಾತನಾಡಿದ ಕೇಂದ್ರ ಸಚಿವ ಕಿರಣ್ ರಿಜಿಜು, ನೀಟ್ ವಿಚಾರವಾಗಿ ಸಭೆಯಲ್ಲಿ ಪ್ರಧಾನಿ ಮೋದಿ ಮಾತನಾಡಿದ್ದಾರೆ. ವಿದ್ಯಾರ್ಥಿಗಳ ಜೊತೆಗೆ ಸರ್ಕಾರ ಸೂಕ್ಷ್ಮತೆಯಿಂದ ವರ್ತಿಸುತ್ತಿದೆ ಸೋರಿಕೆ ಪ್ರಕರಣದಲ್ಲಿ 13 ಜನರನ್ನ ಬಂಧಿಸಲಾಗಿದೆ ಅಪರಾಧಿಗಳಿಗೆ ಕಠಿಣ ಶಿಕ್ಷೆ ಆಗಲಿದೆ ಎಂದು ಮೋದಿ ಹೇಳಿದ್ದಾರೆ ಎಂದರು.

ಪ್ರಶ್ನೆ ಪತ್ರಿಕೆ ಸೋರಿಕೆ ಇದು ಕೇವಲ ಒಂದು ರಾಜ್ಯದ ಸಮಸ್ಯೆ ಅಲ್ಲ. ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಇದು ರಾಜಕೀಯ ವಿಷಯ ಅಲ್ಲ.  ಮೋದಿ ಅವರು ವಿದ್ಯಾರ್ಥಿಗಳ ಭವಿಷ್ಯ ಹಾಳುಗೆಡವಲು ಬಿಡುವುದಿಲ್ಲ ಎಂದಿದ್ದಾರೆ.  ಎನ್ ಡಿಎ ಸಭೆಯಲ್ಲಿ ಮೋದಿ ಹೇಳಿದ್ದಾರೆ.   ವ್ಯಾಪಾರ ಒಪ್ಪಂದದಿಂದ ರೈತರಿಗೆ ನಷ್ಟವಾಗಲ್ಲ ಎಂದಿದ್ದಾರೆ ಎಂದು ಕೇಂದ್ರ ಸಚಿವ ರಿಜಿಜು ತಿಳಿಸಿದರು.

Key words: NEET, illegal, Our government, students, Union Minister, Kiren Rijiju