‘ಅವನೇ ಶ್ರೀಮನ್ನಾರಾಯಣ’ನ ಜೊತೆ ಕೌ ಭಾಯ್ ಕೃಷ್ಣ ಆದ ರಿಷಬ್ ಶೆಟ್ಟಿ !

ಬೆಂಗಳೂರು, ನವೆಂಬರ್ 29, 2019 (www.justkannada.in): ಅವನೇ ಶ್ರೀಮನ್ನಾರಾಯಣ ಸಿನಿಮಾದಲ್ಲಿ ರಿಷಬ್ ಅತಿಥಿ ಪಾತ್ರ ಮಾಡಿದ್ದಾರೆ.

ಇದುವರೆಗೆ ರಿಷಬ್ ಪಾತ್ರ ಮಾಡುವ ಬಗ್ಗೆ ಚಿತ್ರತಂಡ ಎಲ್ಲೂ ಮಾಹಿತಿ ಕೊಟ್ಟಿರಲಿಲ್ಲ. ಆದರೆ ಟ್ರೈಲರ್ ಲಾಂಚ್ ವೇಳೆ ನಿರ್ಮಾಪಕ ಪುಷ್ಕರ್ ಮಲ್ಲಿಕಾರ್ಜುನಯ್ಯ ಈ ಸೀಕ್ರೆಟ್ ಬಹಿರಂಗಪಡಿಸಿದ್ದಾರೆ.

ರಕ್ಷಿತ್ ಶೆಟ್ಟಿ ಇರುವಲ್ಲಿ ನಾನಿರಲೇಬೇಕಲ್ಲಾ? ಎಂದು ಮಾತು ಶುರು ಮಾಡಿದ ರಿಷಬ್, ಅವನ ಒತ್ತಾಯದಿಂದಲೇ ಈ ಸಿನಿಮಾದಲ್ಲಿ ಅತಿಥಿ ಪಾತ್ರ ಮಾಡಿದೆ. ನಾನು ಕೌ ಬಾಯ್ ಕೃಷ್ಣ ಎಂಬ ಪಾತ್ರ ಮಾಡಿದ್ದೇನೆ ಎಂದು ಹೇಳಿದ್ದಾರೆ.