ಕೆಂಪೇಗೌಡ ರಥಯಾತ್ರೆ ವಾಹನದಿಂದ ಬಿದ್ದು ಪೂಜಾ ಕುಣಿತದ ಕಲಾವಿದ ಸಾವು.

ರಾಮನಗರ,ನವೆಂಬರ್,3,2022(www.justkannada.in):  ಕೆಂಪೇಗೌಡ ಪ್ರತಿಮೆ ಅನಾವರಣ ಹಿನ್ನೆಲೆ ಮೃತ್ತಿಕೆ ಸಂಗ್ರಹದ ರಥಯಾತ್ರೆ ವೇಳೆ ವಾಹನದಿಂದ ಬಿದ್ದು ಪೂಜಾಕುಣಿತದ ಕಲಾವಿದರೊಬ್ಬರು ಸಾವನ್ನಪ್ಪಿದ ಘಟನೆ ರಾಮನಗರ ಜಿಲ್ಲೆಯಲ್ಲಿ ನಡೆದಿದೆ.

ಮಾಗಡಿ ತಾಲೂಕಿನ ಮರೂರು ಗ್ರಾಮದಲ್ಲಿ ಈ ಘಟನೆ ನಡೆದಿದೆ. ಪೂಜಾ ಕುಣಿತದ ಕಲಾವಿದರೂ ಆಗಿರುವ ಮಾಗಡಿ ತಾಲೂಕಿನ ಬ್ಯಾಡರಹಳ್ಳಿ ನಿವಾಸಿ ಶ್ರೀನಿವಾಸ್(21) ಮೃತಪಟ್ಟವರು.

ನ.11ರಂದು ಕೆಐಎಬಿ ಮುಂದೆ ಕೆಂಪೇಗೌಡರ ಪ್ರತಿಮೆ ಅನಾವರಣ ಹಿನ್ನೆಲೆ ರಾಜ್ಯಾದ್ಯಂತ ರಥಯಾತ್ರೆ ಮೂಲಕ ಮೃತ್ತಿಕೆ ಸಂಗ್ರಹ ಅಭಿಯಾನ ಮಾಡಲಾಗುತ್ತಿದೆ. ಅದರಂತೆ ಮಾಗಡಿ ತಾಲ್ಲೂಕಿನ ಮರೂರು  ಗ್ರಾಮದಲ್ಲಿ ಮೃತ್ತಿಕೆ ಸಂಗ್ರಹ ಮಾಡುತ್ತಿದ್ದ ವೇಳೆ  ರಥದ ವಾಹನದಿಂದ  ಬಿದ್ದು‌ ಶ್ರೀನಿವಾಸ್  ಮೃತಪಟ್ಟಿದ್ದಾರೆ.

Key words: Pooja dance- artist -dies – falling – Kempegowda -Rath Yatra -vehicle.