ಹಳೇ ಗಂಡನ ಪಾದವೇ ಗತಿ ಎನ್ನುವಂತಾಗಿದೆ- ಡಿಕೆಶಿ ಆಹ್ವಾನಕ್ಕೆ ಸಚಿವ ಬಿ.ಸಿ ಪಾಟೀಲ್ ಟಾಂಗ್.

ಬೆಂಗಳೂರು,ನವೆಂಬರ್,3,2022(www.justkannada.in):  ವಲಸಿಗರಿಗೆ ಪಕ್ಷಕ್ಕೆ ಸೇರ್ಪಡೆಯಾಗುವ ಬಗ್ಗೆ ಆಹ್ವಾನ ನೀಡಿದ್ಧ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಗೆ ಸಚಿವ ಬಿ.ಸಿ ಪಾಟೀಲ್ ಟಾಂಗ್ ನೀಡಿದ್ದಾರೆ.

ಈ ಕುರಿತು ಮಾತನಾಡಿರುವ ಸಚಿವ ಬಿ.ಸಿ ಪಾಟೀಲ್, ಕಾಂಗ್ರೆಸ್ ಗೆ ಹೋಗುವ ಜರೂರತ್ತು ನಮಗೆ ಇಲ್ಲ. ಈಗಾಗಲೇ ಡೈವರ್ಸ್ ತೆಗೆದುಗೊಂಡು ಬಂದಾಗಿದೆ.  ಒಡೆದು ಹೋದ ಹಾಲು ಮನಸ್ಸು ಮತ್ತೆ ಒಂದಾಗಲ್ಲ ಮತ್ತೆ ಕಾಂಗ್ರೆಸ್ ಗೆ ಹೋಗುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದರು.three-contributed-formation-bjp-government-koppal-minister-bc-patil

ಕಾಂಗ್ರೆಸ್ ನಲ್ಲಿ ಕ್ಯಾಂಡಿಡೇಟ್ ಇಲ್ಲ. ಹೀಗಾಗಿ ಕಾಂಗ್ರೆಸ್ ಗೆ ಹಳೆಗಂಡನ ಪಾದವೇ ಗತಿ ಎನ್ನುವಂತಾಗಿದೆ. ನಾವು ಬಿಜೆಪಿಯಲ್ಲಿ ಚೆನ್ನಾಗಿ ಇದ್ದೇವೆ ಎಂದು ಬಿಸಿ ಪಾಟೀಲ್ ತಿಳಿಸಿದರು.

Key words: Minister -BC Patil –Tong- invited –DK Shivakumar