ಯಾರಿದಂಲೂ ದೇವೇಗೌಡರ ಕುಟುಂಬ ಒಡೆಯಲು ಆಗಲ್ಲ-ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ.

ಹಾಸನ, ಏಪ್ರಿಲ್,20,2023(www.justkannada.in):  ಹಾಸನ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿರುವ ಹೆಚ್.ಪಿ ಸ್ವರೂಪ್ ಪರ ಇಂದಿ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರು ಹಾಗೂ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಪ್ರಚಾರ ನಡೆಸಿದರು.

ಹಾಸನ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಸ್ವರೂಪ್ ಪರ ಹೆಚ್.ಡಿ ದೇವೇಗೌಡರು, ಮಾಜಿ ಸಚಿವ ಹೆಚ್.ಡಿ ರೇವಣ್ಣ, ಭವಾನಿ ರೇವಣ್ಣ ಎಲ್ಲರೂ ಒಟ್ಟಿಗೆ ಸೇರಿ ಪ್ರಚಾರ ನಡೆಸಿದರು. ತೆರದ ವಾಹನದಲ್ಲಿ ಹೆಚ್.ಡಿ ದೇವೇಗೌಡರು ಮತಯಾಚನೆ ಮಾಡಿದರು.

ಈ ವೇಳೆ ಮಾತನಾಡಿದ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ, ಹಾಸನ ಕ್ಷೇತ್ರದ ಬಿಜೆಪಿ ಶಾಸಕ  ಪ್ರೀತಂಗೌಡ ಲೂಟಿ ಮಾಡಿದ್ದಾರೆ. ಎಲ್ಲ ಸಾಧಕ ಬಾಧಕ ಚರ್ಚಿಸಿಯೇ ಅಭ್ಯರ್ಥಿ ಘೋಷಣೆ ಮಾಡಿದ್ದೇವೆ. ವಿರೋಧಿಗಳ ಕುತಂತ್ರಕ್ಕೆ ಬಲಿಯಾಗದೇ ಭವಾನಿ ರೇವಣ್ಣ ಸ್ಪಷ್ಟ ಸಂದೇಶ ನೀಡಿದ್ದಾರೆ.  ಸ್ವರೂಪ್ ಗೆ ಬೆಂಬಲ ನೀಡುವ ಮೂಲಕ ಭವಾನಿ ಸಂದೇಶ ನೀಡಿದ್ದಾರೆ ದೇವೇಗೌಡರ ಕುಟುಂಬವನ್ನ ಯಾರಿಂದಲೂ ಒಡೆಯಲು ಆಗಲ್ಲ ಎಂದು ಸಾಬೀತಾಗಿದೆ ಎಂದು ತಿಳಿಸಿದರು.

Key words: Hassan-jds-candidate-swaroop-HD Devegowda-HD Kumaraswamy