ಸರ್ಕಾರ ಸಂಪೂರ್ಣ ನಿಷ್ಕ್ರಿಯ: ಗ್ಯಾರಂಟಿ ಮುಂದುವರೆಯುವುದೇ ಅನುಮಾನ- ಸಂಸದ ಬಿ.ವೈ ರಾಘವೇಂದ್ರ.

ಶಿವಮೊಗ್ಗ,ಜನವರಿ,13,2024(www.justkannada.in): ರಾಜ್ಯದಲ್ಲಿ ಸರ್ಕಾರ ಸಂಪೂರ್ಣ ನಿಷ್ಕ್ರಿಯ ಆಗಿದೆ. ಗ್ಯಾರಂಟಿ ಯೋಜನೆ ಮುಂದುವರೆಯುವ ವಿಶ್ವಾಸವೇ ಇಲ್ಲ ಸಂಸದ ಬಿ.ವೈ ರಾಘವೇಂದ್ರ ಟೀಕಿಸಿದರು.

ಶಿವಮೊಗ್ಗದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರ ಮರಳು ಮಾಡಲು ಹೊರಟಿದೆ. ಗ್ಯಾರಂಟಿಗೆ ಷರತ್ತು ಹಾಕಿ ಫಲಾನುಭವಿಗಳ ಸಂಖ್ಯೆಯನ್ನು ಕಡಿಮೆ ಮಾಡುತ್ತಿದೆ. ಈ ಗ್ಯಾರಂಟಿಗಳು ಚುನಾವಣೆಯ ಬಳಿಕ ಮುಂದುವರೆಯುವುದು ಅನುಮಾನವಾಗಿದೆ.  ಈ ಗ್ಯಾರಂಟಿ ಮುಂದುವರಿಯುವ ವಿಶ್ವಾಸವೇ ಇಲ್ಲದಂತಾಗಿದೆ ಎಂದು ಕಿಡಿಕಾರಿದರು.

ಸರ್ಕಾರ ಸಂಪೂರ್ಣವಾಗಿ ನಿಷ್ಕ್ರಿಯವಾಗಿದೆ ಯುವಜನರ ಕಣ್ಣಿಗೆ ಮಣ್ಣೆತ್ತಿಸುವ ಕೆಲಸ ಮಾಡಿದೆ ನಿರುದ್ಯೋಗಿ ಯುವಕರಿಗೆ ಭತ್ಯೆ ನೀಡುವ ಭರವಸೆ ನೀಡಿದೆ. ಆದರೆ ಈ ಯೋಜನೆಯಲ್ಲಿ ಫಲಾನುಭವಿಗಳನ್ನು ಪಡೆಯಲು ಮಾನದಂಡಗಳನ್ನು ಹಾಕಲಾಗಿದ್ದು ಯುವಕರು ಮತ್ತು ಮತದಾರರಿಗೆ ಕಾಂಗ್ರೆಸ್ ಸರ್ಕಾರ ಮೋಸ ಮಾಡಿದೆ ಎಲ್ಲರ ನಿರೀಕ್ಷೆ ಸುಳ್ಳಾಗಿದೆ ಎಂದು  ವಾಗ್ದಾಳಿ ನಡೆಸಿದರು.

Key words: Govt completely –inactive- Doubt -guarantee -will continue – MP B.Y Raghavendra.