Tuesday, August 4, 2026

BDA Apartments

Home Front Page ಸಂಪುಟ ವಿಸ್ತರಣೆ ನೋಡಿದ್ರೆ ಬೇಸರವಾಗುತ್ತೆ- ಶಾಸಕ ಟಿ.ಬಿ ಜಯಚಂದ್ರ ಅಸಮಾಧಾನ

ಸಂಪುಟ ವಿಸ್ತರಣೆ ನೋಡಿದ್ರೆ ಬೇಸರವಾಗುತ್ತೆ- ಶಾಸಕ ಟಿ.ಬಿ ಜಯಚಂದ್ರ ಅಸಮಾಧಾನ

ಬೆಂಗಳೂರು,ಆಗಸ್ಟ್,4,2026 (www.justkannada.in):  ನಿನ್ನೆ ರಾಜ್ಯ ಸಚಿವ ಸಂಪುಟ ವಿಸ್ತರಣೆಯಾಗಿದ್ದು ಸಚಿವ ಸ್ಥಾನ ಸಿಗದ ಶಾಸಕರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದು ಈ ಮಧ್ಯೆ ಶಾಸಕ ಟಿ.ಬಿ ಜಯಚಂದ್ರ ಸಹ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಮಾತನಾಡಿದ ಶಾಸಕ ಟಿ.ಬಿ ಜಯಚಂದ್ರ,, ಸಚಿವ ಸಂಪುಟ ವಿಸ್ತರಣೆ ನೋಡಿದರೇ ಬೇಸರವಾಗುತ್ತದೆ. ಹಂಗಾಮಿ ಸ್ಪೀಕರ್ ಹುದ್ದೆ ಸ್ಪೀಕರಿಸಲ್ಲ. ಶಾಸಕರು ಹುದ್ದೆ ತೆಗೆದುಕೊಳ್ಳಬೇಡಿ ಎನ್ನುತ್ತಿದ್ದಾರೆ. ನಾನು ಸ್ಪೀಕರ್ ಹುದ್ದೆಯನ್ನು ಹಿಂದೆಯೇ ಬೇಡ ಎಂದಿದ್ದೆ ಎಂದು ಬೇಸರ ವ್ಯಕ್ತಪಡಿಸಿದರು.

ನಿನ್ನೆ ರಾಜ್ಯ ಸಚಿವ ಸಂಪುಟ ವಿಸ್ತರಣೆಯಾಗುತ್ತಿದ್ದಂತೆ ಸಚಿವ ಸ್ಥಾನ ಕೈತಪ್ಪಿದ ಶಾಸಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿ ರಾಜೀನಾಮೆಗೂ ಮುಂದಾಗಿದ್ದರು. ಇದನ್ನು ಗಂಭೀರವಾಗಿ ಪರಿಗಣಿಸಿದ ಕಾಂಗ್ರೆಸ್ ಹೈಕಮಾಂಡ್ ರಾಜೀನಾಮೆ ನೀಡಿದರೇ ಆಂಗೀಕರಿಸುವಂತೆ ಸೂಚಿಸಿತ್ತು.

Key words: cabinet expansion, MLA, TB Jayachandra, unhappy