ಮಾಜಿ ಶಾಸಕ ಎನ್.ಎಸ್ ಖೇಡ ನಿಧನ.

ವಿಜಯಪುರ,ಜೂನ್,3,2021(www.justkannada.in): ವಿಜಯಪುರ ಜಿಲ್ಲೆ ಇಂಡಿ ಕ್ಷೇತ್ರದ  ಮಾಜಿ ಶಾಸಕ ಎನ್.ಎಸ್.ಖೇಡ(70) ಅವರು ನಿಧನರಾಗಿದ್ದಾರೆ.jk

ವಯೋಸಹಜ ಅನಾರೋಗ್ಯ ಹಿನ್ನೆಲೆ ಜಿಲ್ಲೆಯ ಬಿಎಲ್ ಡಿಇ ಆಸ್ಪತ್ರೆಗೆ ಎನ್ ಎಸ್ ಖೇಡ ಅವರನ್ನ ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಎನ್ ಎಸ್ ಖೇಡ ನಿಧನರಾಗಿದ್ದಾರೆ. ಇಂಡಿ ವಿಧಾನಸಭಾ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆ ಆಗಿದ್ದ ಅವರು ಸಮಾಜಮುಖಿ ಚಟುವಟಿಕೆಯಿಂದ ಹೆಸರುವಾಸಿಯಾಗಿದ್ದರು.

ಮಾಜಿ ಶಾಸಕ ಎನ್.ಎಸ್. ಖೇಡ ನಿಧನಕ್ಕೆ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ, ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ ಸೇರಿದಂತೆ ಹಲವರು ಸಂತಾಪ ಸೂಚಿಸಿದ್ದಾರೆ.

Key words: vijaypur-Former MLA -NS Kheda -dies