ಎಸ್ ಪಿ ಬಿ ನೆನಪು ಎಂದಿಗೂ ಅಮರ : ನಟ ಶಿವರಾಜ್ ಕುಮಾರ್

ಬೆಂಗಳೂರು,ಸೆಪ್ಟೆಂಬರ್,25,2020(www.justkannada.in) : ಎಸ್ ಪಿ ಬಿ ಅವರು ಇಲ್ಲ ಎಂದು ಹೇಳುವುದಕ್ಕೆ ತುಂಬಾ ನೋವಾಗುತ್ತದೆ. ಅವರ ನೆನಪು ಎಂದಿಗೂ ಅಮರವಾಗಿರುತ್ತದೆ ಎಂದು ನಟ ಶಿವರಾಜ್ ಕುಮಾರ್ ಹೇಳಿದರು.jk-logo-justkannada-logo

ನಟ ಶಿವರಾಜ್ ಕುಮಾರ್ ಅವರು ಎಸ್.ಪಿ.ಬಾಲಸುಬ್ರಹಮಣ್ಯಂ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದು, ದೈಹಿಕವಾಗಿಯಷ್ಟೇ ಅವರು ನಮ್ಮನ್ನು ಅಗಲಿದ್ದು, ಮಾನಸಿಕವಾಗಿ ಎಂದಿಗೂ ಜೀವಂತವಾಗಿರುತ್ತಾರೆ ಎಂದು ಸ್ಮರಿಸಿದರು.

SPB-Memoir-Never-Immortal-Actor-Shivraj Kumar

ಗಾಯಕ ಎನ್ನುವುದಕ್ಕಿಂತ ಒಳ್ಳೆಯ ಗುಣವುಳ್ಳವರು, ಅಪರೂಪದ ವ್ಯಕ್ತಿತ್ವದವರು. ಅವರ ಧ್ವನಿಗೆ ಮ್ಯಾಜಿಕ್ ಮಾಡುವಂತಹ ಶಕ್ತಿಯಿತ್ತು. ಕನ್ನಡ ಭಾಷೆ, ಕನ್ನಡ ಚಲನಚಿತ್ರರಂಗದೊಂದಿಗೆ ಉತ್ತಮ ಸಂಬಂಧವನ್ನು ಹೊಂದಿದ್ದರು. ಪ್ರತಿ ಹಾಡಿಗೂ ಭಾವ ತುಂಬಿ ಹಾಡುತ್ತಿದ್ದರು. ಅವರ ನಿಧನವು ಬಹಳ ದುಃಖವನ್ನುಂಟು ಮಾಡಿದೆ ಎಂದು ಬೇಸರವ್ಯಕ್ತಪಡಿಸಿದರು.

key words : SPB-Memoir-Never-Immortal-Actor-Shivraj Kumar