ಡಿವೋರ್ಸ್ ಕೇಳಿದ ಪತ್ನಿ: ವಕೀಲರ ಕಚೇರಿಯಲ್ಲೇ ಕೊಲೆಗೆ ಯತ್ನಿಸಿದ ಪತಿ

ಮೈಸೂರು,ಆ,10,2020(www.justkannada.in):  ಡಿವೋರ್ಸ್ ಕೇಳಿದ ಪತ್ನಿಯನ್ನ ಪತಿರಾಯನೊಬ್ಬ ವಕೀಲರ ಕಚೇರಿಯಲ್ಲೇ ಕೊಲೆಗೆ ಯತ್ನಿಸಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.jk-logo-justkannada-logo

ಮೈಸೂರು ಜಿಲ್ಲೆ ಪಿರಿಯಾಪಟ್ಟಣದಲ್ಲಿ ಈ ಘಟನೆ ನಡೆದಿದೆ. ರಘು ಎಂಬಾತನೇ ವಕೀಲರ ಕಚೇರಿಯಲ್ಲೇ ಪತ್ನಿ ಮಮತಾರನ್ನ ಕೊಲ್ಲಲು ಯತ್ನಿಸಿದ್ದು  ಹಲ್ಲೆಯಿಂದ ಗಾಯಗೊಂಡ ಮಮತಾರನ್ನ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ ಪ್ರಾಥಮಿಕ ಚಿಕಿತ್ಸೆ ನೀಡಲಾಯಿತು.mysore-divorce-wife-husband-murder-lawyers-office

ಸಾಂಸಾರಿಕ ಜೀವನದಲ್ಲಿ ವಿರಸ ಉಂಟಾದ ಹಿನ್ನೆಲೆಯಲ್ಲಿ ಪತ್ನಿ ಮಮತಾ ಪತಿ ರಘುವಿನಿಂದ  ಡಿವೋರ್ಸ್ ಕೇಳಿದ್ದರು. ಈ ಬಗ್ಗೆ ವಕೀಲರನ್ನು ಭೇಟಿಯಾಗಲು ಮಮತಾ ಬಂದಿದ್ದರು. ಈ ವೇಳೆ ವಕೀಲರ ಕಚೇರಿಯಲ್ಲೇ ಪತಿ ರಘು  ಪತ್ನಿ ಮಮತಾರ ಕೊಲೆಗೆ ಯತ್ನಿಸಿದ್ದು  ರಕ್ತದ ಮಡುವಿನಲ್ಲಿ ಒದ್ದಾಡುತ್ತಿದ್ದ ಮಹಿಳೆಯನ್ನು ಸ್ಥಳೀಯರು ಆಸ್ಪತ್ರೆಗೆ ಸೇರಿಸಿದ್ದು, ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿಗೆ ರವಾನೆ ಮಾಡಲಾಯಿತು.

Key words: mysore- Divorce – wife-husband – murder – lawyer’s- office.