ಐತಿಹಾಸಿಕ ಜಂಬೂಸವಾರಿ ಆರಂಭ: ತಾಯಿ ಚಾಮುಂಡೇಶ್ವರಿ ಉತ್ಸವ ಮೂರ್ತಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಚಾಲನೆ ನೀಡಿದ ಸಿಎಂ ಬಿಎಸ್ ಯಡಿಯೂರಪ್ಪ..

ಮೈಸೂರು,ಅ,8,2019(www.justkannada.in):   ಕ್ಯಾಪ್ಟನ್ ಅರ್ಜುನ ಹೊತ್ತು ಸಾಗುತ್ತಿರುವ ಚಿನ್ನದ ಅಂಬಾರಿಯಲ್ಲಿರುವ ತಾಯಿ ಚಾಮುಂಡೇಶ್ವರಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಐತಿಹಾಸಿಕ ದಸರಾ ಜಂಬೂ ಸವಾರಿ ಮೆರವಣಿಗೆಗೆ ಸಿಎಂ ಬಿಎಸ್ ಯಡಿಯೂರಪ್ಪ ಚಾಲನೆ ನೀಡಿದರು.

ಮೈಸೂರು ಅರಮನೆ ಮುಂಭಾಗದ ಹಾಕಜಲಾಗಿದ್ದ ವೇದಿಕೆ ಬಳಿಗೆ 750 ಕೆಜಿ ಚಿನ್ನದ ಅಂಬಾರಿ ಹೊತ್ತು ಕ್ಯಾಪ್ಟನ್ ಅರ್ಜುನ ಆಗಮಿಸಿದನು. ಈ ವೇಳೆ ವೇದಿಕೆಯಲ್ಲಿದ್ದ ಸಿಎಂ ಬಿಎಸ್ ಯಡಿಯೂರಪ್ಪ ತಾಯಿ ಚಾಮುಂಡೇಶ್ವರಿಗೆ ಶುಭ ಕುಂಭ ಲಗ್ನದಲ್ಲಿ ಪುಷ್ಪಾರ್ಚನೆ ಮಾಡಿದರು. ಈ ಸಮಯದಲ್ಲಿ ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ, ಮೇಯರ್ ಪುಷ್ಪಲತಾ ಜಗನ್ನಾಥ್  ಸಾಥ್ ನೀಡಿದರು.

8ನೇ ಬಾರಿಗೆ  ಅಂಬಾರಿ ಹೊತ್ತ ಅರ್ಜುನ ಹೆಜ್ಜೆ ಹಾಕುತ್ತಿದ್ದು, ಕುಮ್ಕಿ ಆನೆಗಳಾದ  ಕಾವೇರಿ ಬಲಭಾಗದಲ್ಲಿ ವಿಜಯ ಎಡಭಾಗದಲ್ಲಿ ಸಾಗುತ್ತಿದ್ದಾನೆ.

Key words: mysore dasara- jamboo savari- cm bs yeddyurappa-arjuna- ambari