ಪತ್ರಕರ್ತ ಪವನ್ ಹೆತ್ತೂರು ನಿಧನಕ್ಕೆ ಸಚಿವ ಎಸ್.ಟಿ.ಸೋಮಶೇಖರ್ ಸಂತಾಪ

ಮೈಸೂರು,ಅಕ್ಟೋಬರ್,18,2020(www.justkannada.in) : ಯುವ ಪತ್ರಕರ್ತ ಪವನ್ ಹೆತ್ತೂರು ಅವರ ಅಕಾಲಿಕ ನಿಧನ ತೀವ್ರ ಬೇಸರ ತಂದಿದೆ ಎಂದು ಸಹಕಾರ ಮತ್ತು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಸಂತಾಪ ಸೂಚಿಸಿದ್ದಾರೆ.jk-logo-justkannada-logoಕರೋನಾ ಹೆಮ್ಮಾರಿ ಅವರನ್ನು ಬಲಿ ಪಡೆದಿರುವುದು ನಿಜಕ್ಕೂ ಖೇದಕರ. ಪತ್ರಕರ್ತರು ಕೊರೋನಾ ವಾರಿಯರ್ಸ್ ಆಗಿರುವುದರಿಂದ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು ಎಂದು ನಾನು ಈ ಮೂಲಕ ಮಾಧ್ಯಮ ಮಿತ್ರರಲ್ಲಿ ಮನವಿ ಮಾಡುತ್ತೇನೆ. ಪವನ್ ಅವರ ನಿಧನದ ನೋವು ಭರಿಸುವ ಶಕ್ತಿಯನ್ನು ಭಗವಂತ ಕರುಣಿಸಲಿ ಎಂದು ಈ ಮೂಲಕ ಪ್ರಾರ್ಥಿಸುತ್ತೇನೆ.

Minister S.T.Somashekhar,condoles,death,journalist,Pawan Hettur

key words : Minister S.T.Somashekhar-condoles-death- journalist-Pawan Hettur