ಮಂಡ್ಯದ ಜನತೆಗೆ ಕಾಮನ್ ಸೆನ್ಸ್ ಕಮ್ಮಿನೆ : ಸಂಸದೆ ಸುಮಲತಾ ಕಾಲೆಳೆದ ನೆನಪಿರಲಿ’ ರತ್ನಜ.

ಮೈಸೂರು, ಜ.22, 2021 : (www.justkannada.in news): ಸಂಸದೆ ಸುಮಲತಾ ಅಂಬರೀಷ್ ವರ್ತನೆ ವಿರುದ್ಧ ಮಂಡ್ಯದ ರೈತರು ಅಸಮಧಾನ ವ್ಯಕ್ತಪಡಿಸಿದ್ದಾರೆ. ಮಂಡ್ಯದ ಶುಗರ್ ಫ್ಯಾಕ್ಟರಿಯಲ್ಲಿ ಪುತ್ರನ ಸಿನಿಮಾದ ಚಿತ್ರೀಕರಣ ನಡೆಸುತ್ತಿರುವುದು ಈಗ ವಿವಾದಕ್ಕೆ ಎಡೆ ಮಾಡಿದೆ.

ಸ್ಥಗಿತಗೊಂಡಿರುವ ಕಾರ್ಖಾನೆ ಪುನರಾರಂಭಿಸಬೇಕಾದ ಸಂಸದರು, ಆ ಬಗ್ಗೆ ಗಮನ ಹರಿಸದೆ, ಮುಚ್ಚಿರುವ ಫ್ಯಾಕ್ಟರಿಯಲ್ಲಿ ಪ್ರಭಾವ ಬಳಸಿ ಪುತ್ರನ ಸಿನಿಮಾ ( ಬ್ಯಾಡ್ ಮ್ಯಾನರ್ಸ್ )ಚಿತ್ರೀಕರಣ ನಡೆಸುತ್ತಿದ್ದಾರೆ. ಇದು ಎಷ್ಟು ಸರಿ ಎಂಬುದು ರೈತರ ಪ್ರಶ್ನೆ.

jk

ರೈತರ ಈ ಆಕ್ರೋಶಕ್ಕೆ ತೀಕ್ಷಣವಾಗಿಯೇ ಪ್ರತ್ಯತ್ತರ ನೀಡಿರುವ ಸಂಸದೆ ಸುಮಲತಾ, ಚಿತ್ರೀಕರಣ ವಿರೋಧಿಸುತ್ತಿರುವವರಿಗೆ ಬುದ್ದಿ ಬೇಡ, ಕನಿಷ್ಠ ಜ್ಞಾನ ( ಕಾಮನ್ ಸೆನ್ಸ್ ) ಆದ್ರು ಇರಬೇಕಿತ್ತು. ಮಂಡ್ಯ ಶುಗರ್ ಫ್ಯಾಕ್ಟರಿಯಲ್ಲಿ ಇದೇ ಮೊದಲು ಚಿತ್ರೀಕರಣ ಮಾಡುತ್ತಿಲ್ಲ. ಈ ಹಿಂದೆಯೂ ಶಿವಣ್ಣ, ಸುದೀಪ್ ರ ಸಿನಿಮಾಗಳ ಶೂಟಿಂಗ್ ನಡೆದಿದೆ. ಆಗೆಲ್ಲಾ ಇಲ್ಲದ ವಿರೋಧ ಈಗ ಏಕೆ..? ಎಂದು ಪ್ರಶ್ನಿಸಿ, ಸುಮ್ನೆ ಸುಮಲತಾ ವಿರೋಧ ಮಾಡಿದ್ರೆ ಪ್ರಚಾರ ಸಿಗುತ್ತೆ ಅನ್ನೋ ಸಲುವಾಗಿ ನನ್ನನ್ನು ವಿರೋಧಿಸುತ್ತಿದ್ದಾರೆ ಎಂಬ ಹೇಳಿಕೆ ನೀಡಿದ್ದಾರೆ.

mandya-mp-sumalatha-ambarish-formers-oppose-film-shooting-sugar-factory

ಸಂಸದೆ ಸುಮಲತಾ ಹೇಳಿಕೆಗೆ ಮಂಡ್ಯದ ರೈತರು ಅಸಮಧಾನ ವ್ಯಕ್ತಪಡಿಸಿದ್ದಾರೆ. ಸ್ಯಾಂಡಲ್ ವುಡ್ ಚಿತ್ರ ನಿರ್ದೇಶಕ, ಹಾಲಿ ಪ್ರಗತಿಪರ ರೈತ ‘ ನೆನಪಿರಲಿ’ ರತ್ನಜ, ಸಂಸದರ ನಡೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಫೇಸ್ ಬುಕ್ ನಲ್ಲಿ ಅಭಿಪ್ರಾಯ ಹಂಚಿಕೊಂಡಿರುವ ರತ್ನಜ, ಸಂಸದರು ಹೇಳುತ್ತಿರುವುದು ಸತ್ಯವಾದ ಮಾತು. ಯಾಕಂದ್ರೆ ಇವಮ್ಮನಿಗೆ ಓಟು ಹಾಕಿ ಗೆಲ್ಲಿಸಿದ ಮಂಡ್ಯದ ಜನತೆಗೆ ಕಾಮನ್ ಸೆನ್ಸ್ ಕಮ್ಮಿನೆ ( ನನ್ನನ್ನು ಸೇರಿದಂತೆ ) ಎಂದು ವ್ಯಂಗ್ಯವಾಡಿದ್ದಾರೆ.

00000

key words : mandya-mp-sumalatha-ambarish-formers-oppose-film-shooting-sugar-factory