“ಲಾಕ್ ಡೌನ್ ಆಗಬಾರದು, ಕರ್ಪ್ಯೂ ಮಾಡಬಾರದು ಅಂದರೆ ಸಹಕರಿಸಿ” : ಸಿಎಂ ಯಡಿಯೂರಪ್ಪ ಮನವಿ 

ಬೆಂಗಳೂರು,ಮಾರ್ಚ್,14,2021(www.justkannada.in) : ಕೋವಿಡ್ ಸೋಂಕು ಕೈ ಮೀರಿ ಹೋಗುತ್ತಿದೆ. ಸರ್ಕಾರದ ಜೊತೆ ಜನರು ಸಹಕರಿಸಬೇಕು, ಲಾಕ್ ಡೌನ್ ಆಗಬಾರದು ಅಂತಿದ್ದರೆ, ಕರ್ಪ್ಯೂ ಮಾಡಬಾರದು ಅಂತಿದ್ದರೆ ಸಹಕರಿಸಿ ಎಂದು ಸಿಎಂ ಯಡಿಯೂರಪ್ಪ ಜನರಲ್ಲಿ ಕೇಳಿಕೊಂಡಿದ್ದಾರೆ.jkಕೋವಿಡ್ ನಿಯಮ ಪಾಲಿಸಿದರೆ ಸೋಂಕು ಹರಡುವುದನ್ನು ನಿಯಂತ್ರಣ ಮಾಡಬಹುದು. ಮಹಾರಾಷ್ಟ್ರದಲ್ಲೂ ಹೆಚ್ಚಾಗುತ್ತಿದೆ. ಗಡಿಗಳಲ್ಲಿಯೂ ಬಿಗಿ ಕ್ರಮ ಕೈಗೊಳ್ಳುವ ಬಗ್ಗೆ ನಿರ್ಧಾರ ಮಾಡುತ್ತೇವೆ ಎಂದರು.

ವಿರೋಧ ಪಕ್ಷದವರು ತಮ್ಮ ಕರ್ತವ್ಯ ನಿರ್ವಹಿಸಲಿ

Lock down-Should not-Curfew-Don't-Collaborate-CM Yeddyurappa-Appeal  

ರಮೇಶ್ ಜಾರಕಿಹೊಳಿ ಸಿಡಿ ವಿಚಾರವಾಗಿ ಮಾತನಾಡಿದ ಸಿಎಂ, ವಿರೋಧ ಪಕ್ಷದವರು ತಮ್ಮ ಕರ್ತವ್ಯ ನಿರ್ವಹಿಸಲಿ, ಅವರು ಸರ್ಕಾರಕ್ಕೆ ಸಲಹೆ ಕೊಟ್ಟರೆ ಅದನ್ನ ಸ್ವೀಕರಿಸುತ್ತೇವೆ. ಸಚಿವರು ಎಚ್ಚರಿಕೆಯಿಂದ ಕೆಲಸ ಮಾಡಲು ಸಹಕಾರಿ ಆಗುತ್ತೆ ಎಂದು ತಿಳಿಸಿದರು.

key words : Lock down-Should not-Curfew-Don’t-Collaborate-CM Yeddyurappa-Appeal