ವಿಧಾನಸಭೆ ಚುನಾವಣೆ ಸಮೀಪ ಹಿನ್ನೆಲೆ ಬಿಜೆಪಿಯಿಂದ  ಈ ರೀತಿ ಕೆಲಸ- ಸತೀಶ್ ಜಾರಕಿಹೊಳಿ ವಾಗ್ದಾಳಿ.

 ಬಾಗಲಕೋಟೆ,ಮಾರ್ಚ್,25,2022(www.justkannada.in):  ಹಿಜಾಬ್ ವಿಚಾರ ಮತ್ತು ಜಾತ್ರೆಗಳಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ನಿರ್ಬಂಧ ವಿಚಾರಕ್ಕೆ ಸಂಬಂಧಿಸಿದಂತೆ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಬಾಗಲಕೋಟೆಯಲ್ಲಿ ಇಂದು ಮಾಧ್ಯಮಗಳ ಜತೆ ಮಾತನಾಡಿದ ಸತೀಶ್ ಜಾರಕಿಹೊಳಿ, ಇದೆಲ್ಲ ಸಕ್ಸಸ್ ಆಗಲ್ಲ. ಯಾರೋ ಹೇಳ್ತಾರೆ ಅಂತ ಹಿಂದೂಗಳನ್ನಾಗಲಿ ಮುಸ್ಲೀಮರನ್ನಾಗಿ ಹೊರಹಾಕಲು ಸಾಧ್ಯವಿಲ್ಲ.  ಸುಮ್ಮನೆ ರಾಜಕೀಯಕ್ಕಾಗಿ ಈ ರೀತಿ ಮಾಡುತ್ತಾರೆ. ವಿಧಾನಸಭೆ ಚುನಾವಣೆ ಹತ್ತಿರ ಬರುತ್ತಿದೆ. ಹೀಗಾಗಿ ಬಿಜೆಪಿ ಈ ರೀತಿಯ ಕೆಲಸ ಮಾಡುತ್ತಿದೆ. ಈ ಬಗ್ಗೆ ಜನರು ಜಾಗೃತರಾಗಬೇಕು ಎಂದು ತಿಳಿಸಿದರು.Belagavi Lok Sabha Byelections: Satish Jarkiholi's candidature opposed

Key words: kpcc-sathish jarkiholi-bjp