ಡಿಕೆಶಿ ಪದಗ್ರಹಣ ರಾಜ್ಯಕ್ಕೆ, ದೇಶಕ್ಕೆ ಮುಖ್ಯ ಅಲ್ವೆ…? ಕಂದಾಯ ಸಚಿವ ಆರ್.ಅಶೋಕ್ ವ್ಯಂಗ್ಯ…

ಬೆಂಗಳೂರು,ಜೂ,10,2020(www.justkannada.in): ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಪದಗ್ರಹಣ ಕಾರ್ಯಕ್ರಮ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಕಂದಾಯ ಸಚಿವ ಆರ್.ಅಶೋಕ್ , ಡಿಕೆಶಿ  ಡಿಕೆಶಿ ಪದಗ್ರಹಣ ರಾಜ್ಯಕ್ಕೆ, ದೇಶಕ್ಕೆ ಮುಖ್ಯ ಅಲ್ವೆ…? ಎಂದು ವ್ಯಂಗ್ಯವಾಡಿದ್ದಾರೆ.

ಈ ಬಗ್ಗೆ ಇಂದು ಮಾಧ್ಯಮಗಳ ಜತೆ ಮಾತನಾಡಿದ ಸಚಿವ ಆರ್.ಅಶೋಕ್,  ಕೆಪಿಸಿಸಿ ಅಧ್ಯಕ್ಷ ರಾದ ಡಿ.ಕೆ ಶಿವಕುಮಾರ್ ಅವರು ಸರ್ಕಾರದ ಮೇಲೆ ಇಲ್ಲ-ಸಲ್ಲದ ಆರೋಪಗಳನ್ನು ಮಾಡುತ್ತಿದ್ದಾರೆ. ಅವರ ಪದಗ್ರಹಣ  ಕಾರ್ಯಕ್ರಮಕ್ಕೆ ನಮ್ಮ ಅಭ್ಯಂತರವಿಲ್ಲ.  ಅದ್ಧೂರಿಯಾಗಿ ಕಾರ್ಯಕ್ರಮ ಮಾಡಬೇಕಾದರೇ ತಿದ್ದುಪಡಿ ಮಾಡಬೇಕಾಗುತ್ತೆ. ಇವರಿಗೆ ಬೇರೆ ಒಂದು ಕಾನೂನು ಮಾಡಬೇಕಾಗುತ್ತೆ. ಅವರ ಪದಗ್ರಹಣ ಕಾರ್ಯಕ್ರಮ ದೇಶಕ್ಕೆ ರಾಜ್ಯಕ್ಕೆ ಬಹಳ ಮುಖ್ಯವೇ ಎಂದು ಲೇವಡಿ ಮಾಡಿದರು.kpcc-president-dk-shivakumar-function-minister-r-ashok

ವಿಧಾನ ಪರಿಷತ್ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆ ಕುರಿತು ಪ್ರತಿಕ್ರಿಯಿಸಿದ ಸಚಿವ ಆರ್.ಅಶೋಕ್ , ವಿಧಾನಪರಿಷತ್​ಗೆ ಈಗಷ್ಟೇ ಚುನಾವಣೆ ಘೋಷಣೆ ಆಗಿದೆ. ಕೇಂದ್ರ ಮತ್ತು ರಾಜ್ಯದ ನಾಯಕರು ಚರ್ಚೆ ಮಾಡಿ ಅಭ್ಯರ್ಥಿಗಳ ಹೆಸರು ಪ್ರಕಟಿಸುತ್ತಾರೆ. ಈಗಾಗಲೇ ಯಡಿಯೂರಪ್ಪ ಅವರು ಕೆಲವರಿಗೆ ಮಾತು ಕೊಟ್ಟಿದ್ದಾರೆ.  ಚರ್ಚೆ ನಂತರ ಅಭ್ಯರ್ಥಿಗಳ ಹೆಸರು ಹೇಳಲಾಗುತ್ತದೆ ಎಂದು ತಿಳಿಸಿದರು.

ಸದ್ಯ ರಾಜ್ಯಸಭೆಗೆ  ನಮ್ಮ ಪಕ್ಷದ ನಿಷ್ಠಾವಂತ ಕಾರ್ಯಕರ್ತರಿಗೆ ಅವಕಾಶ ನೀಡಲಾಗಿದೆ. ಕಾಂಗ್ರೆಸ್ ​ನಂತೆ ಕುಟುಂಬ ರಾಜಕಾರಣಕ್ಕೆ ಮಣೆ ಹಾಕಿಲ್ಲ. ಇದರಿಂದ ಕಾಂಗ್ರೆಸ್​ನಲ್ಲಿ ಈಗಾಗಲೇ ಬಂಡಾಯ ಶುರುವಾಗಿದೆ. ನಿವೃತ್ತಿ ಹೊಂದಿರುವವರಿಗೆ ಅವಕಾಶ ನೀಡಿದ್ದಕ್ಕೆ ಬಂಡಾಯ ಎದ್ದಿದೆ ಎಂದು ಸಚಿವ ಆರ್.ಅಶೋಕ್ ಚಾಟಿ ಬೀಸಿದರು.

Key words: kpcc president-dk shivakumar- function- minister-R.Ashok