ಪತ್ರಕರ್ತ, ಬರಹಗಾರ ರವಿ ಬೆಳಗೆರೆ ನಿಧನ : ಡಿಸಿಎಂ ಡಾ.ಸಿ.ಎನ್.ಅಶ್ವತ್ಥ ನಾರಾಯಣ ಸಂತಾಪ

ಮೈಸೂರು,ನವೆಂಬರ್,13,2020(www.justkannada.in) : ಹಿರಿಯ ಪತ್ರಕರ್ತ, ಬರಹಗಾರ ರವಿ ಬೆಳಗೆರೆಯವರ ನಿಧನಕ್ಕೆ ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥ ನಾರಾಯಣ ಸಂತಾಪ ಸೂಚಿಸಿದ್ದಾರೆ.kannada-journalist-media-fourth-estate-under-loss

ರವಿ ಬೆಳಗೆರೆಯವರ ಅವರ ಆತ್ಮಕ್ಕೆ ಶಾಂತಿ ಸಿಗಲಿ. ಈ ದುಃಖವನ್ನು ಭರಿಸುವ ಶಕ್ತಿಯನ್ನು ಭಗವಂತನು ಅವರ ಕುಟುಂಬ-ಹಿತೈಷಿವರ್ಗಕ್ಕೆ ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಟ್ವೀಟ್ ಮಾಡಿದ್ದಾರೆ.

Journalist,writer,Ravi Belagere,dies,Dr.C.N. Ashwaththa Narayana,obituary

ರವಿಬೆಳೆಗೆರೆ ಅವರು ಕನ್ನಡ ಪತ್ರಿಕೋದ್ಯಮದ ಬೆಡಗು ಮತ್ತು ಅಚ್ಚರಿ. ಅವರು ಬರೆದ ಪ್ರತಿ ಅಕ್ಷರವೂ ಅಷ್ಟೇ ಅಚ್ಚರಿಯೊಂದಿಗೆ ಓದುಗರನ್ನು ಬೆರಗುಗೊಳಿಸುತ್ತಿತ್ತು. ಓರ್ವ ಪತ್ರಕರ್ತ, ಲೇಖಕ, ನಟ, ನಿರೂಪಕ ಹೀಗೆ ಹಲವು ರೂಪಗಳೊಂದಿಗೆ ಕನ್ನಡಿಗರಿಗೆ ಅತಿ ಹತ್ತಿರವಾಗಿದ್ದರು ಅವರು.

ಅವರ ಜನಪ್ರಿಯ ಅಂಕಣಗಳ ಜತೆಗೆ ಸೃಜನಶೀಲ ಬರವಣೆಗೆಯಲ್ಲೂ ಅವರು ಎತ್ತಿದ ಕೈ ಆಗಿದ್ದರು. ಕನ್ನಡ ಸಾರಸ್ವತ ಲೋಕದ ಬಹುಮುಖ್ಯ ಪ್ರತಿಭೆಯಾಗಿ ರವಿಬೆಳಗೆರೆ ಸಾಕಷ್ಟು ಕೃಷಿ ಮಾಡಿದ್ದಾರೆ. ಅವರು ಬರೆದ ಕೃತಿಗಳು ಅನೇಕ. ಆತ್ಮ, ಮಾಂಡೋವಿ, ಹೇಳಿ ಹೋಗು ಕಾರಣ, ಮಾಟಗಾತಿ, ನೀ ಹೀಂಗ ನೋಡಬ್ಯಾಡ ನನ್ನ, ಫ್ರಮ್‌ ಪುಲ್ವಾಮ, ಪಾ.ವೆಂ.ಹೇಳೀದ ಕಥೆ, ಖಾಸ್‌ಬಾತ್‌ ಮುಂತಾದ ಕೃತಿಗಳು ಅವರನ್ನು ಎತ್ತರದಲ್ಲಿ ನಿಲ್ಲಿಸಿ ವಿರಾಜಮಾನಗೊಳಿಸಿವೆ.

ಕಾರ್ಗಿಲ್‌ ಯುದ್ಧಭೂಮಿಗೆ ಹೋಗಿಬಂದ ರವಿಬೆಳಗೆರೆ, ಕೆಲ ವರ್ಷಗಳ ಹಿಂದೆ ನಡೆದ ಪುಲ್ವಾಮ ದಾಳಿಯ ಸ್ಥಳಕ್ಕೂ ಹೋಗಿದ್ದರು. ಹಿಂದೆ ಗುಜರಾತ್‌ ಭೂಕಂಪ ಸ್ಥಳಕ್ಕೂ ಹೋಗಿ ಬರೆದಿದ್ದರು. ಸಾಹಸ ಪ್ರವೃತ್ತಿಯ ರವಿಬೆಳೆಗೆರೆ ಅಗಲಿಕೆ ಕನ್ನಡಕ್ಕೆ ನಿಜಕ್ಕೂ ನಷ್ಟ. ಅವರಿಗೆ ಪರ್ಯಾಯವೂ ಕಷ್ಟ.

ರವಿಬೆಳೆಗೆರೆ ಅವರ ಅಭಿಮಾನಿಗಳು, ಕುಟುಂಬದವರಿಗೆ ಅವರ ಅಗಲಿಕೆಯ ನೋವು ಭರಿಸುವ ಶಕ್ತಿ ಆ ಭಗವಂತ ನೀಡಲಿ. ರವಿ ಅವರಿಗೆ ಚಿರಶಾಂತಿ ಸಿಗಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಡಿಸಿಎಂ ಅಶ್ವಥ್ ನಾರಾಯಣ್ ಸಂತಾಪ ಸೂಚಿಸಿದ್ದಾರೆ.

key words :Journalist-writer-Ravi Belagere-dies- Dr.C.N. Ashwaththa Narayana-obituary