ನಗುವಿನ ಕಚಗುಳಿ ಇಡಲು ಬಂದ ಗುರುಪ್ರಸಾದ್-ಜಗ್ಗೇಶ್ ಜೋಡಿಯ ‘ರಂಗನಾಯಕ’

ಬೆಂಗಳೂರು, ಅಕ್ಟೋಬರ್ 10, 2019 (www.justkannada.in): ನಿರ್ದೇಶಕ ಗುರುಪ್ರಸಾದ್ ಹಾಗೂ ನವರಸ ನಾಯಕ ಜಗ್ಗೇಶ್ ಮತ್ತೆ ಒಂದಾಗಿದ್ದಾರೆ.

‘ರಂಗನಾಯಕ’ ಎಂಬ ಮತ್ತೊಂದು ಅದ್ಭುತ ಸಿನಿಮಾವನ್ನ ಕೊಡೋಕೆ ಮುಂದಾಗಿದ್ದಾರೆ. ಇದರ ಟೀಸರ್ ಕೂಡ ಬಿಡುಗಡೆಯಾಗಿದ್ದು, ಎಂದಿನಂತೆ ಕಚಗುಳಿ ಇಡುತ್ತಿದೆ.

ಕನ್ನಡಿಗರಿಗೆ ಖುಷಿ ಕೊಡುವ ಸಲುವಾಗಿ ಒಂದಾಗಿದ್ದೇವೆ ಅನ್ನೋದು ಜಗ್ಗೇಶ್ ಮಾತು. ಆದರೆ ಚಿತ್ರದಲ್ಲಿ ಭರ್ಜರಿ ಹಾಸ್ಯ ಇರುವುದು ಟೀಸರ್ ನಿಂದಲೇ ಗೊತ್ತಾಗುತ್ತಿದೆ.