ಮಾಜಿ ಸಿಎಂ ಸಿದ್ದರಾಮಯ್ಯ ಅವರಿಂದ ಎಚ್.ಡಿ.ಕೋಟೆ ಕನಕ ಭವನ ಉದ್ಘಾಟನೆ…

ಮೈಸೂರು,ನ,8,2019(www.justkannada.in): ಮಾಜಿ ಸಿಎಂ ಸಿದ್ದರಾಮಯ್ಯ ಅವರು ಎಚ್.ಡಿ.ಕೋಟೆಯಲ್ಲಿ  ಕನಕ ಭವನ ಉದ್ಘಾಟನೆ ಮಾಡಿದರು

4 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿರುವ ಭವನ‌ವನ್ನ ಸಿದ್ದರಾಮಯ್ಯ ಉದ್ಘಾಟಿಸಿದರು. ಉದ್ಘಾಟನಾ ಕಾರ್ಯಕ್ರಮದಲ್ಲಿ ಶಾಸಕರಾದ ಅನಿಲ್ ಚಿಕ್ಕಮಾದು, ಡಾ.ಯತೀಂದ್ರ ಸಿದ್ದರಾಮಯ್ಯ, ಮಾಜಿ ಸಂಸದ ಆರ್.ಧ್ರುವ ನಾರಾಯಣ, ಮಾಜಿ ಸಚಿವ ಡಾ.ಎಚ್.ಸಿ.ಮಹದೇವಪ್ಪ, ಮುಖಂಡಾದ ಎಂ.ಕೆ.ಸೋಮಶೇಖರ್, ಡಿ.ರವಿಶಂಕರ್ ಸೇರಿದಂತೆ ಪ್ರಮುಖರು ಭಾಗಿಯಾಗಿದ್ದರು

ಇದಕ್ಕೂ ಮುನ್ನ ಎಚ್.ಡಿ.ಕೋಟೆಯಲ್ಲಿ ಸಿದ್ದರಾಮಯ್ಯ ರೋಡ್ ಶೋ ನಡೆಸಿದರು. ಸಿದ್ದರಾಮಯ್ಯಗೆ ಸೇಬಿನ ಹಾರ ಹಾಕಿ ಅಭಿಮಾನಿಗಳು ಸಂಭ್ರಮಿಸಿದರು.

Key words: Inauguration – HD Kotte- Kanaka Bhavan – former CM Siddaramaiah.