‘ದಿ ಬಾಂಬೆ ಡೇಸ್’: ದಿಲ್ಲಿಯಲ್ಲಿ ಹೊಸ ಪುಸ್ತಕ ರಿಲೀಸ್ ಮಾಡ್ತೀನಿ ಎಂದ ಮಾಜಿ ಸಚಿವ ಎಚ್.ವಿಶ್ವನಾಥ್

ಮೈಸೂರು, ಜೂನ್ 28, 2020 (www.justkannada.in): ಮುಂದೆ ನನ್ನ ಹಾದಿ ಸುಗಮವಾಗಿದೆ. ಇದು 40ವರ್ಷದಿಂದ ನಡೆದು ಬಂದ ಹಾದಿ ಇದು. ನಾನು ಯಾವ ಪಕ್ಷದಲ್ಲೇ ಇದ್ರು ಪಕ್ಷವನ್ನ ಪ್ರೀತಿ ಮಾಡುತ್ತೇನೆ. ಪಕ್ಷದ ನಾಯಕತ್ವದ ನಡುವಳಿಕೆ ವಿರುದ್ಧ ದಂಗೆ ಎದ್ದವನು ನಾನು. ನಾವೇ ತಂದ ಸಿದ್ದರಾಮಯ್ಯನ ವಿರುದ್ಧ ದಂಗೆ ಎದ್ದವನು. ಸಮಿಶ್ರ ಸರ್ಕಾರದ ಕುಮಾರಸ್ವಾಮಿ ವಿರುದ್ಧ ದಂಗೆ ಎದ್ದವನು ನಾನು ಎಂದು ಎಚ್ವಿ ಹೇಳಿದರು.

ಮೈಸೂರಿನಲ್ಲಿ ಮಾತನಾಡಿದ ಅವರು, ಇದು ಭಾವನೆ ಮತ್ತು ನಂಬಿಕೆಗಳು. ಅದಕ್ಕೆ ಇವತ್ತು ನಾನು ಪುಸ್ತಕಕ್ಕೆ ಅಣಿಯಾಗುತ್ತಿದ್ದೇನೆ. ದಿ ಬಾಂಬೆ ಡೇಸ್ ಎಂದು ಪುಸ್ತಕಕ್ಕೆ ಹೆಸರು ಕೊಟ್ಟಿದ್ದೇನೆ. 2006ರ ಕುಮಾರಸ್ವಾಮಿ ಯಡಿಯೂರಪ್ಪ ಮಾಡಿದ್ದು ಕ್ಷಿಪ್ರ ಕ್ರಾಂತಿಯಂತೆನಾವು ಮಾಡಿದ್ದು ಪಕ್ಷಕ್ಕೆ ದ್ರೋಹ ಅಂತೆ, ಅವ್ರು ಮಾಡಿದ್ದು ಕ್ಷಿಪ್ರ ಕ್ರಾಂತಿಯಂತೆ ಎಂದು ಕುಮಾರಸ್ವಾಮಿ ವಿರುದ್ಧ ವಿಶ್ವನಾಥ್ ವ್ಯಂಗ್ಯವಾಡಿದರು.ನಾನೊಬ್ಬ ಲೇಖಕನಾಗಿ ಇದು ನನ್ನ ಕರ್ತವ್ಯ. ಮೂರು ಭಾಷೆಯಲ್ಲಿ ಈ ಪುಸ್ತಕ ರಿಲೀಸ್ ಆಗಲಿದೆ ಎಂದು ಎಚ್ವಿ ತಿಳಿಸಿದರು.

ಈ ಪುಸ್ತಕ ದೆಹಲಿಯಲ್ಲಿ ಬಿಡುಗಡೆ ಮಾಡುತ್ತೇನೆ. ಬಾಂಬೆಯಲ್ಲಿ ಏನಾಯ್ತು ಅದೆಲ್ಲ ಪುಸ್ತಕ ಬರೆಯುತ್ತಿದ್ದೇನೆ. ಒಂದು ಸರ್ಕಾರ ಹೋಗಿ ಮತ್ತೊಂದು ಸರ್ಕಾರ ಬರಲೇಬೇಕಿದೆ. ಜನತಂತ್ರ ವ್ಯವಸ್ಥೆಯಲ್ಲಿ ಭಾವನೆ, ನಂಬಿಕೆ ಮೇಲಿನ ತಲ್ಲಣವೇನು. ಇದೆಲ್ಲವನ್ನು ಅಕ್ಷರದ ಮೂಲಕ ಜನರಿಗೆ ತಿಳಿಸುತ್ತೇನೆ ಎಂದರು.

ರವಿ ಬೆಳಗೆರೆ ಅವ್ರು, 2006ರಲ್ಲಿ ಯಡಿಯೂರಪ್ಪ ಕುಮಾರಸ್ವಾಮಿ ಬಗ್ಗೆ ಬರೆದಿದ್ದಾರೆ. ಇದು ಕ್ಷೀಪ್ರ ಕ್ರಾಂತಿ ಅಲ್ಲ, ಕಾಮರಾಜ ಮಾರ್ಗ ಪುಸ್ತಕದಲ್ಲಿ ಬರೆದಿದ್ದಾರೆ. ಸುಮಾರು 70ಪುಟಗಳಲ್ಲಿ ಯಾವ ಎಸ್ಟೇಟ್‌ಗೆ ಹೋಗಿದ್ರು ಎಲ್ಲವನ್ನು ಬರೆದಿದ್ದಾರೆ. ಈ ಬಗ್ಗೆ ಬರೆಯುವುದರಲ್ಲಿ ಯಾವುದೇ ತಪ್ಪಿಲ್ಲ. ಬರೆಯೋದ್ರಿಂದ ಸರ್ಕಾರಕ್ಕೆ ಏನು ಆಗಲ್ಲ, ಸರ್ಕಾರ ಗಟ್ಟಿಯಾಗಿದೆ ಮೈಸೂರಿನಲ್ಲಿ ಮಾಜಿ ಸಚಿವ ಹೆಚ್ ವಿಶ್ವನಾಥ್ ಹೇಳಿದರು.