ಎತ್ತಿನಗಾಡಿ ಓಟದ ಸ್ಪರ್ಧೆ ವೇಳೆ ಅನಾಹುತ: ಇಬ್ಬರು ಯುವಕರ ಮೇಲೆ ಹರಿದ ಎತ್ತಿನಗಾಡಿ….

ಮೈಸೂರು,ಮಾರ್ಚ್,20,2021(www.justkannada.in):  ಜೋಡಿ ಎತ್ತಿನಗಾಡಿ ಓಟ ಸ್ಪರ್ಧೆ ವೇಳೆ ಇಬ್ಬರ ಯುವಕರ ಮೇಲೆ  ಎತ್ತಿನಗಾಡಿ ಹರಿದು ಇಬ್ಬರು ಗಾಯಗೊಂಡಿರುವ ಘಟನೆ ಮೈಸೂರು ಜಿಲ್ಲೆ ಟಿ. ನರಸೀಪುರ ತಾಲ್ಲೂಕಿನಲ್ಲಿ ನಿನ್ನೆ ನಡೆದಿದೆ.Government,Social,Economic,Educational,survey,Report,Should,receive,Former CM,Siddaramaiah 

ನರಸೀಪುರದ ಹೊರವಲಯದ ಮೈದಾನದಲ್ಲಿ ಎತ್ತಿನಗಾಡಿ ಓಟದ ಸ್ಪರ್ಧೆ ಆಯೋಜಿಸಲಾಗಿತ್ತು. ಈ ವೇಳೆ ಈ ಅನಾಹುತ ಸಂಭವಿಸಿದ್ದು ಘಟನೆಯಲ್ಲಿ ಓರ್ವನ ಸ್ಥಿತಿ ತೀವ್ರ ಗಂಭೀರವಾಗಿದ್ದು ಮತ್ತೊಬ್ಬನಿಗೆ ಗಂಭೀರ ಗಾಯಗಳಾಗಿದೆ. ಹೊಸಳ್ಳಿ ಗ್ರಾಮದ ಯುವಕ ರವಿ ಸ್ಥಿತಿ ಗಂಭೀರವಾಗಿದೆ. ಯುವಕ ರವಿ ಮೈಸೂರಿನ ಕೊಲಂಬಿಯ ಏಷ್ಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ettinagadi-race-mysore-t-narasipur-two-injured
ಕೃಪೆ-internet

ಎತ್ತಿನಗಾಡಿ ಓಟದ ಸ್ಪರ್ಧೆಯನ್ನ ವೀಕ್ಷಿಸುತ್ತಿದ್ದ ವೇಳೆ ಅತಿ ವೇಗವಾಗಿ ಬಂದ ಎತ್ತಿನಗಾಡಿ ಯುವಕರ ಗುಂಪಿನತ್ತ ನುಗ್ಗಿದೆ. ಈ ಸಮಯದಲ್ಲಿ ಎತ್ತಿನಗಾಡಿ ಯುವಕರ ಮೇಲೆ ಹರಿದು ಪಲ್ಟಿಯಾಗಿದೆ ಎನ್ನಲಾಗಿದೆ.

Key words: ettinagadi race-mysore- T.Narasipur-two –injured