ಕೊರೋನಾಗೆ ಕೊಪ್ಪಳದಲ್ಲಿ ಇಬ್ಬರು ಮತ್ತು ರಾಯಚೂರಿನಲ್ಲಿ ಓರ್ವ ಕಾನ್ಸ್ ಟೇಬಲ್ ಬಲಿ…

ಕೊಪ್ಪಳ,ಜು,29,2020(www.justkannada.in):  ರಾಜ್ಯದಲ್ಲಿ ಮಹಾಮಾರಿ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು ಜತೆಗೆ ಕೊರೋನಾಗೆ ಸೋಂಕಿಗೆ ಬಲಿಯಾಗುತ್ತಿರುವವರ ಪ್ರಮಾಣವೂ ಹೆಚ್ಚಾಗುತ್ತಿದೆ.jk-logo-justkannada-logo

ಇಂದು ಕೊರೋನಾ ಮಹಾಮಾರಿಗೆ ಕೊಪ್ಪಳದಲ್ಲಿ ಇಬ್ಬರು ಬಲಿಯಾಗಿದ್ದಾರೆ. ಗಂಗಾವತಿ ಮೂಲದ 46 ವರ್ಷದ ಮಹಿಳೆ, ಯಲ್ಬುರ್ಗದ ಸೋಂಪುರ ನಿವಾಸಿ 70 ವರ್ಷದ ವೃದ್ಧ ಕೊರೋನಾ ಸೋಂಕಿನಿಂದ ಸಾವನ್ನಪ್ಪಿದ್ದಾರೆ. ಇಬ್ಬರು ಕೊಪ್ಪಳ ಕೋವಿಡ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.corona-koppala-two-raichur-constable-death

ಹಾಗೆಯೇ ರಾಯಚೂರಿನಲ್ಲಿ ಪೊಲೀಸ್ ಕಾನ್ಸ್ ಟೇಬಲ್ ಕೊರೋನಾ ಸೋಂಕಿನಿಂದ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ಬೆಂಗಳೂರಿನಲ್ಲಿ ರಾಚಂದ್ರಪುರದ ನಿವಾಸಿ 66 ವರ್ಷದ ವೃದ್ಧ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಉತ್ತರ ಕನ್ನಡ ಜಿಲ್ಲೆಯಲ್ಲಿ 76 ವರ್ಷದ ವ್ಯಕ್ತಿ ಕೊರೊನಾಗೆ ಬಲಿಯಾಗಿದ್ದಾರೆ.

Key words: Corona –Koppala –two- raichur- constable-death