ರಾಜ್ಯದಲ್ಲಿ ಜೆಡಿಎಸ್ ಅಧಿಕಾರಕ್ಕೆ ತರದಿದ್ರೆ ಸನ್ಯಾಸತ್ವ ಸ್ವೀಕರಿಸುತ್ತೇನೆ- ‘ಕೈ’ ನಾಯಕರಿಗೆ ಸಿಎಂ ಇಬ್ರಾಹಿಂ ಚಾಲೇಂಜ್..

ಬೆಂಗಳೂರು,ಜೂನ್,3,2022(www.justkannada.in): ರಾಜ್ಯದಲ್ಲಿ ಜೆಡಿಎಸ್ ಅಧಿಕಾರಕ್ಕೆ ತರದಿದ್ದರೇ ಸನ್ಯಾಸತ್ವ ಸ್ವೀಕರಿಸುತ್ತೇನೆ ಎಂದು ಕಾಂಗ್ರೆಸ್ ನಾಯಕರಿಗೆ ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ಸವಾಲು ಹಾಕಿದರು.

ರಾಜ್ಯಸಭಾ ಚುನಾವಣೆಯಲ್ಲಿ ಕಾಂಗ್ರೆಸ್ 2ನೇ ಅಭ್ಯರ್ಥಿಯಾಗಿ ಮನ್ಸೂರ್ ಖಾನ್ ರನ್ನ ಕಣಕ್ಕಿಳಿಸಿದೆ. ಈ ಮಧ್ಯೆ 2ನೇ ಅಭ್ಯರ್ಥಿ ನಾಮಪತ್ರ ವಾಪಸ್ ಪಡೆದು ಜೆಡಿಎಸ್ ಬೆಂಬಲಿಸುವಂತೆ ಕಾಂಗ್ರೆಸ್ ಹೈಕಮಾಂಡ್ ಗೆ ಜೆಡಿಎಸ್ ಒತ್ತಡ ಹಾಕಿತ್ತು ಎನ್ನಲಾಗಿದೆ. ಆದರೆ ಮಾಜಿ ಸಿಎಂ ಸಿದ್ಧರಾಮಯ್ಯ ಯಾವುದೇ ಕಾರಣಕ್ಕೂ 2ನೇ ಅಭ್ಯರ್ಥಿಯನ್ನ ವಾಪಸ್ ಪಡೆಯಲ್ಲ ಎಂದು ಸ್ಪಷ್ಟನೆ ನೀಡಿದರು.

ಈ ಕುರಿತು ಪ್ರತಿಕ್ರಿಯಿಸಿದ ಸಿಎಂ ಇಬ್ರಾಹಿಂ, ಜೆಡಿಎಸ್ ಸೋಲಿಸಲು 2ನೇ ಅಭ್ಯರ್ಥಿ ಹಾಕಿದ್ದಾರೆ.  ರಾಜ್ಯದಲ್ಲಿ ಜೆಡಿಎಸ್ ಅಧಿಕಾರಕ್ಕೆ ತಂದೇ ತರುತ್ತೇವೆ . ಅಧೀಕಾರಕ್ಕೆ ತರದಿದ್ರೆ ಸನ್ಯಾಸತ್ವ ಪಡೆಯುತ್ತೇನೆ. ನನ್ನ ಮಾತಿಗೆ ನಾನು ಬದ್ಧನಿದ್ದೇನೆ.  ಕಾಂಗ್ರೆಸ್ ನಾಯಕರು ಇಂತಹ ಚಾಲೇಂಜ್ ತೆಗೆದುಕೊಳ್ತಾರಾ..? ಎಂದು ಟಾಂಗ್ ನೀಡಿದರು.

Key words: congress-leaders-jds-president-CM Ibrahim