ಅನುಚಿತ ವರ್ತನೆ ಆರೋಪ: ಚಾಮುಂಡಿ ಬೆಟ್ಟದ ಸಿಬ್ಬಂದಿ ವಿರುದ್ದ ಕೇಂದ್ರ ಸಚಿವ ಡಿ.ವಿ ಸದಾನಂದಗೌಡ ಗರಂ…

ಮೈಸೂರು,ಸೆ,29,2019(www.justkannanda.in):   ಅನುಚಿತ ವರ್ತನೆ ತೋರಿದ್ದಾರೆಂದು ಆರೋಪಿಸಿ ಕೇಂದ್ರ ಸಚಿವ ಡಿ.ವಿ ಸದಾನಂದಗೌಡರು ಚಾಮುಂಡಿಬೆಟ್ಟದ ಸಿಬ್ಬಂದಿ ವಿರುದ್ದ ಗರಂ ಆದ ಘಟನೆ ಇಂದು ನಡೆಯಿತು.

ಇಂದು ಮೈಸೂರಿನ ಚಾಮುಂಡಿಬೆಟ್ಟದಲ್ಲಿ ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ಹಿರಿಯ ಸಾಹಿತಿ ಎಸ್.ಎಲ್ ಭೈರಪ್ಪ ಚಾಲನೆ ನೀಡಿದರು. ಈ ನಡುವೆ ಕಾರ್ಯಕ್ರಮ ನಡೆಯುತ್ತಿದ್ದು ಕೇಂದ್ರ ಸಚಿವ ಸದಾನಂದಗೌಡರು ಚಾಮುಂಡಿಬೆಟ್ಟದ ಸಿಬ್ಬಂದಿ ವಿರುದ್ದ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಇನ್ನು ಸಿಬ್ಬಂದಿ ಜತೆ ಕೆಲ ಕಾಲ ಸದಾನಂದಗೌಡರು ಮಾತಿನ ಚಕಮಕಿ ನಡೆಸಿ ನಂತರ ವಾಪಸ್ ಹೋಗುವುದಾಗಿ ಪಟ್ಟು ಹಿಡಿದರು ಎನ್ನಲಾಗಿದೆ. ಈ ವೇಳೆ ಪೊಲೀಸರು ಕೇಂದ್ರ ಸಚಿವಸದಾನಂದಗೌಡರನ್ನ ಸಮಾಧಾನಪಡಿಸಿದ್ದಾರೆ.

Key words: chamundi hills- Union Minister- DV Sadananda Gowda – against- Chamundi hill -guard