ಸಿಡಿ ವಿಚಾರದಲ್ಲಿ 5 ಕೋಟಿ ವ್ಯವಹಾರದ ಬಗ್ಗೆ ಮೊದಲೇ ಹೇಳಿದ್ದೆ- ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ…

ಬೆಂಗಳೂರು,ಮಾರ್ಚ್,18,2021(www.justkannada.in ರಮೇಶ್ ಜಾರಕಿಹೊಳಿ ಸಿಡಿ ವಿಚಾರದಲ್ಲಿ 5 ಕೋಟಿ ವ್ಯವಹಾರ ನಡೆದಿರುವ ಬಗ್ಗೆ ಹಾಗೂ ನರೇಶ್ ಎಂಬ ಹುಡುಗನ ಬಗ್ಗೆಯೂ ಹೇಳಿದ್ದೆ ಎಂದು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಹೇಳಿಕೆ ನೀಡಿದ್ದಾರೆ.jk

ಈ ಕುರಿತು ಇಂದು ಮಾತನಾಡಿದ ಹೆಚ್.ಡಿ ಕುಮಾರಸ್ವಾಮಿ, ಸಿಡಿ ವಿಚಾರದಲ್ಲಿ ನರೇಶ್ ಎಂಬ ಹುಡುಗನ ಬಗ್ಗೆ ಮೊದಲೇ ಹೇಳಿದ್ದೆ. 5 ಕೋಟಿ ವ್ಯವಹಾರದ ಬಗ್ಗೆಯೂ ಹೇಳಿದ್ದೆ. 5ಕೋಟಿ ವ್ಯವಹಾರ ನಡೆದಿದೆ ಎಂತಲೂ ಹೇಳಿದ್ದೆ.  ಈಗ ಎಲ್ಲವೂ ಒಂದೊಂದಾಗಿ ಹೊರಬರ್ತಿದೆ.  ಆದರೆ ಯಾರು ಮಹಾನಾಯಕ ಅನ್ನೊದು ಗೊತ್ತಾಗಬೇಕು. ಎಸ್ ಐಟಿ ಅಧಿಕಾರಿಗಳು ವಾಸ್ತವಾಂಶ ಬಹಿರಂಗಪಡಿಸಬೇಕು ಎಂದರು.CD case-.5 crore -Former CM- HD Kumaraswamy.

ಸಿಡಿ ಬಹಿರಂಗ ಪ್ರಕರಣದಲ್ಲಿ  ಮಹಾನಾಯಕನ ಬಗ್ಗೆ ನನಗೂ ಗೊತ್ತಿಲ್ಲ, ಆ ನಾಯಕ ಯಾರು ಎಂದು ಎಸ್‌ಐಟಿ ಪೊಲೀಸರೇ ತಿಳಿಸಬೇಕು. ಎಸ್‌ಐಟಿ ಪೊಲೀಸರು ಯಾವುದೇ ಮುಲಾಜಿಲ್ಲದೆ ರಾಜ್ಯದ ಜನತೆ ಮುಂದೆ ಸಿಡಿ ಪ್ರಕರಣದ ಸತ್ಯಾಸತ್ಯತೆ ಹೊರಗಿಡಬೇಕು ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.

Key words: CD case-.5 crore -Former CM- HD Kumaraswamy.