BREAKING NEWS : ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ಡಾ.ನಟೇಶ್ ಎತ್ತಂಗಡಿ: ಹೊಸ ಆಯುಕ್ತರಾಗಿ ಶೀಲವಂತ.

 

ಬೆಂಗಳೂರು, ಜೂ.19, 2021 : (www.justkannada.in news) ಕೆ.ಎ.ಎಸ್ (ಆಯ್ಕೆ ಶ್ರೇಣಿ/ಹಿರಿಯ ಶ್ರೇಣಿ/ಕಿರಿಯ ಶ್ರೇಣಿ) ಅಧಿಕಾರಿಗಳನ್ನು ಸಾರ್ವಜನಿಕ ಮತ್ತು ಆಡಳಿತಾತ್ಮಕ ಹಿತದೃಷ್ಟಿಯಿಂದ ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಅವರುಗಳ ಹೆಸರಿನ ಮುಂದೆ ನಮೂದಿಸಿರುವ ಹುದ್ದೆಗಳಿಗೆ ವರ್ಗಾಯಿಸಿ ಆದೇಶಿಸಿದ ರಾಜ್ಯ ಸರಕಾರ.

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ಡಾ.ನಟೇಶ್ ಅವರನ್ನು ಪಶುಪಾಲನ ಇಲಾಖೆ ಜಂಟಿ ನಿರ್ದೇಶಕರನ್ನಾಗಿ ವರ್ಗಾಯಿಸಲಾಗಿದೆ. ಈ ಸ್ಥಳದಲ್ಲಿದ್ದ ಶೀಲವಂತ ಎಂ.ಶಿವಕುಮಾರ್ ಅವರನ್ನು ಮುಡಾ ಆಯುಕ್ತರನ್ನಾಗಿ ನೇಮಿಸಲಾಗಿದೆ.

ಇದೇ ರೀತಿ ಕೆಎಎಸ್ ಅಧಿಕಾರಿಗಳಾದ ಎಸ್.ರಂಗಪ್ಪ, ಡಾ.ವಾಸಂತಿ ಅಮರ್, ಶ್ರೀರೂಪ, ಪಾತರಾಜು ವಿ, ಅವರನ್ನು ವರ್ಗಾಯಿಸಿ ಆದೇಶಿಸಲಾಗಿದೆ.

 

key words : mysore-urban-development-authority-MUDA- KAS-transfer-commissioner-natesh-shilavantha-shivakumar