‘ನಾನೇ ದೇವೆಗೌಡರ ಮನೆ ಬಾಗಿಲ ಕ್ಲೋಸ್ ಮಾಡಿಕೊಂಡು ಬಂದಿದ್ದೇನೆ’-ಹೆಚ್.ಡಿಕೆಗೆ ಶಾಸಕ ಜಿ.ಟಿ ದೇವೇಗೌಡ ತಿರುಗೇಟು.

ಮೈಸೂರು,ಡಿಸೆಂಬರ್,10,2021(www.justkannada.in): ನನಗೇನ್ ಜೆಡಿಎಸ್ ಬಾಗಿಲು ಬಂದ್ ಮಾಡೋದು..? ನಾನೇ ದೇವೆಗೌಡರ ಮನೆ ಬಾಗಿಲನ್ನ ದಡಾರಂತ ಕ್ಲೋಸ್ ಮಾಡಿಕೊಂಡು ಬಂದಿದ್ದೇನೆ ಎಂದು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿಗೆ ಶಾಸಕ ಜಿ.ಟಿ ದೇವೇಗೌಡ ತಿರುಗೇಟು ನೀಡಿದರು.

ಮೈಸೂರಿನಲ್ಲಿ ಇಂದು ಮಾತನಾಡಿದ ಶಾಸಕ ಜಿಟಿ ದೇವೇಗೌಡ, ಜಿಲ್ಲಾಧ್ಯಕ್ಷರನ್ನಾಗಿ ಮಾಡಲು ದೇವೇಗೌಡರು, ಹೆಚ್.ಡಿ ಕುಮಾರಸ್ವಾಮಿ, ಹೆಚ್.ಡಿ ರೇವಣ್ಣ ಕರೆದರು. ಆದರೆ ಜಿಲ್ಲಾ ನಾಯಕರು ಒಪ್ಪಲಿಲ್ಲ. ಅಂದೇ ನಾನೇ ದೇವೆಗೌಡರ ಮನೆ ಬಾಗಿಲನ್ನ ದಡಾರಂತ ಕ್ಲೋಸ್ ಮಾಡಿಕೊಂಡು ಬಂದಿದ್ದೇನೆ. ಅಂದಿನಿಂದ ಬಾಗಿಲು ಹಾಕಿದ್ದರೋ, ತೆಗೆದಿದ್ದಾರೋ ನಾನ್ಯಾಕೆ ನೋಡಲಿ ಎಂದರು.

ವಿಧಾನ ಪರಿಷತ್‌ ಗೆ ತಜ್ಞರು , ಬುದ್ದಿಜೀವಿಗಳು ಆರಿಸಿ ಹೋಗಬೇಕು. ಆದರೆ ಹಿನ್ನೆಲೆ ಹೇಗೆ ಇದ್ದರೂ ದುಡ್ಡೊಂದಿದ್ರೆ ಸಾಕು ಎನ್ನುವಂತಾಗಿದೆ. ಮೈಸೂರಿನಲ್ಲಿ ಮಂಜುನಾಥಸ್ವಾಮಿಯ ಬೆಳ್ಳಿಯ ಕಾಯಿನ್, ಜೊತೆಗೆ ಉಪ್ಪು,ಮಾರಿ ಕೂದಲು ಇಟ್ಟು ಆಣೆ ಪ್ರಮಾಣ ಮಾಡಿಸಲಾಗ್ತಿದೆ. ಇದನ್ನ ನೋಡಿದ್ರೆ ಪರಿಷತ್‌ ನ ಪಾವಿತ್ರತೆಗೆ ಕಳಂಕ ಅಲ್ಲವೇ..? ಎಂದು ಜಿ.ಟಿ ದೇವೇಗೌಡರು ಪ್ರಶ್ನಿಸಿದರು.

ಪರಿಷತ್ ಫಲಿತಾಂಶ ಮೈಸೂರಿಗಷ್ಟೇ ಅಲ್ಲ. ಇಡೀ ರಾಜ್ಯಕ್ಕೆ ಒಂದು ಹೊಸ ಶಕ್ತಿ ತುಂಬಲಿದೆ. ಬಹುಮತ ಪಡೆದ ಪಕ್ಷಕ್ಕೆ ಒಂದು ಹೊಸ ಚೈತನ್ಯ ತುಂಬಲಿದೆ. ಮೈಸೂರಿನಲ್ಲಿ ಎರಡು ಮತಗಳಿಗೆ ಅವಕಾಶ ಇದೆ. ನಾನು ಮೊದಲ, ಎರಡನೇ‌ ಪ್ರಾಶಸ್ತ್ಯ ಮತ ಹಾಕಿದ್ದೇನೆ. ಯಾರಿಗೆ ಎಂಬುದನ್ನ ಬಹಿರಂಗಪಡಿಸಿದ್ರೆ ಕಾನೂನು ಉಲ್ಲಂಘನೆಯಾಗುತ್ತದೆ ಎಂಧು ಜಿ.ಟಿ ದೇವೇಗೌಡರು ತಿಳಿಸಿದರು.

Key words: closed -door -Deve Gowda’s –house-MLA -GT Deve Gowda- HD kumaraswamy