Friday, August 7, 2026

BDA Apartments

Home Front Page ಈಗಾಗಲೇ ಸರ್ವೇ ಮಾಡಿಸಿದ್ದೇವೆ: ಕಾಂಗ್ರೆಸ್ ಅಭ್ಯರ್ಥಿ ಗೆಲ್ಲುತ್ತಾರೆ- ಡಿಸಿಎಂ ಡಿಕೆ ಶಿವಕುಮಾರ್

ಈಗಾಗಲೇ ಸರ್ವೇ ಮಾಡಿಸಿದ್ದೇವೆ: ಕಾಂಗ್ರೆಸ್ ಅಭ್ಯರ್ಥಿ ಗೆಲ್ಲುತ್ತಾರೆ- ಡಿಸಿಎಂ ಡಿಕೆ ಶಿವಕುಮಾರ್

ದಾವಣಗೆರೆ,ಮಾರ್ಚ್,23,2026 (www.justkannada.in): ನಾವು ಈಗಾಗಲೇ ಸರ್ವೇ ಮಾಡಿಸಿದ್ದೇವೆ. ಕಾಂಗ್ರೆಸ್ ಅಭ್ಯರ್ಥಿಗಳು ಗೆಲ್ಲುತ್ತಾರೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ತಿಳಿಸಿದರು.

ಇಂದು ದಾವಣಗೆರೆ ದಕ್ಷಿಣ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸಮರ್ಥ್ ನಾಮಪತ್ರ ಸಲ್ಲಿಸಿದ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಡಿಸಿಎಂ ಡಿಕೆ ಶಿವಕುಮಾರ್, ಕೆಲ ಲೆಕ್ಕಾಚಾರ ಹಾಕಿಕೊಂಡು ಅಭ್ಯರ್ಥಿ ಘೋಷಿಸಿದ್ದೇವೆ. ಅಲ್ಪಸಂಖ್ಯಾತರನ್ನು ಮೂರು ಬಾರಿ ಎಂಎಲ್ ಸಿ ಮಾಡಿದ್ದೇವೆ.  ಮುಂದೆ ಕೂಡ  ಅವಕಾಶಗಳೂ ಇವೆ. ಆಗ ಸ್ಥಾನಮಾನ ನೀಡುತ್ತೇವೆ ಎಂದರು.

ಮುಸ್ಲಿಂ ಸಮುದಾಯದ ಅಸಮಾಧಾನಿತರು ಶಾಮನೂರು ಆಪ್ತರು.  ಎಲ್ಲರಿಗೂ ಪವರ್ ಶೇರ್ ಮಾಡುವ ಕೆಲಸ ಮಾಡುತ್ತೇವೆ ರಾಜಕೀಯದಲ್ಲಿ ಟಿಕೆಟ್ ಕೇಳುವ ಹಕ್ಕು ಇದೆ.  ಜಿಲ್ಲೆ ಅಭಿವೃದ್ದಿಗೆ ಸಾವಿರಾರು ಕೋಟಿ ಅನುದಾನ ನೀಡಲಾಗಿದೆ ಬಿಜೆಪಿ  ಕಾರ್ಯಕರ್ತರು ಕಾಂಗ್ರೆಸ್ ಸೇರ್ಪಡೆಯಾಗುತ್ತಿದ್ದಾರೆ ಎಂದು ಡಿಕೆ ಶಿವಕುಮಾರ್ ಹೇಳಿದರು.

Key words: survey, Congress candidate, will, win, DCM, DK Shivakumar