ಅರಣ್ಯ ಸಚಿವರ ಮನೆ ಬಳಿ ಮೊಸಳೆ ಪ್ರತ್ಯಕ್ಷ…!

ಬೆಂಗಳೂರು,ನವೆಂಬರ್,11,2020(www.justkannada.in) :  ಅರಣ್ಯ ಸಚಿವ ಆನಂದ್ ಸಿಂಗ್ ನಿವಾಸದ ಬಳಿ ಮೊಸಳೆ ಪ್ರತ್ಯಕ್ಷವಾಗಿದೆ.kannada-journalist-media-fourth-estate-under-loss

ಬಳ್ಳಾರಿ ಜಿಲ್ಲೆಯ ಹೊಸಪೇಟೆ ನಗರದ ಬೈಪಾಸ್ ಬಳಿಯ ಸಚಿವರ ಮನೆ ಮುಂದೆ ಮೊಸಳೆ ಕಾಣಿಸಿಕೊಂಡಿದ್ದು, ಆತಂಕಕ್ಕೆ ಕಾರಣವಾಯಿತು.

ಎಲ್.ಎಲ್.ಸಿ.ಕಾಲುವೆಯಿಂದ ಸಚಿವರ ನಿವಾಸದ ಮುಂಭಾಗದ ರಸ್ತೆಗೆ ಬಂದಿದ್ದ ಮೊಸಳೆ

ಎಲ್.ಎಲ್.ಸಿ.ಕಾಲುವೆಯಿಂದ ಸಚಿವರ ನಿವಾಸದ ಮುಂಭಾಗದ ರಸ್ತೆಗೆ ಬಂದಿದ್ದ ಮೊಸಳೆಯನ್ನು ಕಮಲಾಪುರದ ಅಟಲ್ ವಾಜಪೇಯಿ ಝೂಲಾಜಿಕಲ್ ಪಾರ್ಕ್ ಸಿಬ್ಬಂದಿ ಸೆರೆ ಹಿಡಿದು ಝೂಲಾಜಿಕಲ್ ಪಾರ್ಕ್ ಗೆ ಕೊಂಡೊಯ್ದಿದ್ದಾರೆ.

ನಿನ್ನೆ ರಾತ್ರಿ ಈ ಘಟನೆ ಸಂಭವಿಸಿದ್ದು, ಅರಣ್ಯ ಸಚಿವರ ಮನೆ ಬಳಿ ಬಂದಿದ್ದ ಅತಿಥಿಯನ್ನು ಸಿಬ್ಬಂದಿ ತಕ್ಷಣ ರಕ್ಷಿಸಿ ಝೂಲಾಜಿಕಲ್ ಪಾರ್ಕ್ ನಲ್ಲಿ ಬಿಟ್ಟಿರುವುದಾಗಿ ತಿಳಿದು ಬಂದಿದೆ.

Crocodile-eyewear-near-forest-minister's-house

key words : Crocodile-eyewear-near-forest-minister’s-house