Friday, August 7, 2026

BDA Apartments

Home Front Page ದುಡ್ಡಿನ ಆಮಿಷವೊಡ್ಡಿ ಕಾಂಗ್ರೆಸ್ ನಿಂದ 5ನೇ ಅಭ್ಯರ್ಥಿ ಹಾಕಿದ್ದಾರೆ- ಆರ್.ಅಶೋಕ್

ದುಡ್ಡಿನ ಆಮಿಷವೊಡ್ಡಿ ಕಾಂಗ್ರೆಸ್ ನಿಂದ 5ನೇ ಅಭ್ಯರ್ಥಿ ಹಾಕಿದ್ದಾರೆ- ಆರ್.ಅಶೋಕ್

ಬೆಂಗಳೂರು,ಜೂನ್ 18,2026 (www.justkannada.in):  ದುಡ್ಡಿನ ಆಮಿಷವೊಡ್ಡಿ ವಿಧಾನಪರಿಷತ್ ಚುನಾವಣೆಗೆ ಕಾಂಗ್ರೆಸ್ ನಿಂದ 5ನೇ ಅಭ್ಯರ್ಥಿ ಹಾಕಿದ್ದಾರೆ ಎಂದು ವಿಪಕ್ಷ ನಾಯಕ  ಆರ್.ಅಶೋಕ್ ಆರೋಪಿಸಿದರು.

ಇಂದು ವಿಧಾನ ಪರಿಷತ್ ನ 7 ಸ್ಥಾನಗಳಿಗೆ ಮತದಾನ ನಡೆಯುತ್ತಿದ್ದು ಈ ಕುರಿತು ಮಾತನಾಡಿದ ಆರ್.ಅಶೋಕ್, ನಮ್ಮ ನಿರೀಕ್ಷೆಯಂತೆ ಚುನಾವಣೆ ಆಗಿದೆ. ಬಿಜೆಪಿ ಗೆಲ್ಲಬೇಕಾದಷ್ಟು ಮತಗಳನ್ನ ಹಾಕಿಸಿಕೊಂಡಿದ್ದೇವೆ ಉಳಿತ ಮತಗಳನ್ನ ಜೆಡಿಎಸ್ ಗೆ ಹಾಕಿಸಿದ್ದೇವೆ . ಜೆಡಿಎಸ್ ಜತೆ ಮೈತ್ರಿ ಕಾರಣಕ್ಕೆ ಹೆಚ್ಚುವರಿ ಮತ ಅವರಿಗೆ ನೀಡಿದ್ದೇವೆ ಎಂದರು.

ಇಬ್ಬರು ಬಿಜೆಪಿ ಉಚ್ಛಾಟಿತ ಶಾಸಕರು ಕಾಂಗ್ರೆಸ್ ಗೆ ಮತದಾನ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಎಸ್ ಟಿ ಸೋಮಶೇಖರ್,   ಎಸ್ ಟಿ ಸೋಮಶೇಖರ್, ಶಿವರಾಂ ಹೆಬ್ಬಾರ್ ಕಾಂಗ್ರೆಸ್ ಜೊತೆ ಇದ್ದಾರೆ. ಯತ್ನಾಳ್ ಬಿಜೆಪಿ ಪರ ಮತ ಹಾಕುವುದಾಗಿ ಹೇಳಿದ್ದಾರೆ ಎಂದರು.

Key words: Congress, 5th candidate, money,  R. Ashok