ಜು.10ಕ್ಕೆ ರಾಜ್ಯಪಾಲರ ವಂದನಾ ನಿರ್ಣಯದ ಚರ್ಚೆಗೆ ಸಿಎಂ ಉತ್ತರ- ಸ್ಪೀಕರ್ ಯು.ಟಿ.ಖಾದರ್

ಬೆಂಗಳೂರು,ಜುಲೈ, 6,2023(www.justkannada.in): ಜುಲೈ 10ರಂದು ವಿಧಾನಸಭೆಯಲ್ಲಿ ಮುಖ್ಯಮಂತ್ರಿಗಳು ರಾಜ್ಯಪಾಲರ ವಂದನಾ ನಿರ್ಣಯದ ಚರ್ಚೆಗೆ ಉತ್ತರಿಸಲಿದ್ದಾರೆ ಎಂದು ಸಭಾಧ್ಯಕ್ಷ ಯು.ಟಿ.ಖಾದರ್ ಅವರು ತಿಳಿಸಿದರು.

ಇಂದು ವಿಧಾನಸಭೆಯ ಕಲಾಪದಲ್ಲಿ  ಮಾತನಾಡಿದ ಅವರು,  ಸಿಎಂ ಸಿದ್ಧರಾಮಯ್ಯ ರಾಜ್ಯಪಾಲರ       ವಂದನಾ ನಿರ್ಣಯದ ಚರ್ಚೆಗೆ ಜುಲೈ 6ರಂದು ಉತ್ತರವನ್ನು ನೀಡಬೇಕಾಗಿದ್ದು, ಹೆಚ್ಚಿನ ಶಾಸಕರು ವಿಧಾನಸಭೆಯಲ್ಲಿ ಚರ್ಚಿಸಬೇಕಾಗಿರುವುದರಿಂದ ಜುಲೈ 10ರಂದು ಸೋಮವಾರ   ಉತ್ತರ ನೀಡಲಿದ್ದಾರೆ ಎಂದು ತಿಳಿಸಿದರು.

Key words: CM-answer-legislative assembly- Governor’s – June 10- Speaker -UT Khader