ಬೆಂಗಳೂರಿನ ISRO ಕಚೇರಿಗೆ ಬಾಂಬೆ ಬೆದರಿಕೆ ಹಾಕಿದ್ದ ಆರೋಪಿ ಅಂದರ್

ಬೆಂಗಳೂರು,ಜುಲೈ,3,2026 (www.justkannada.in):  ಬೆಂಗಳೂರಿನ ಇಸ್ರೋ ಕಚೇರಿಗೆ ಇ-ಮೇಲ್ ಮೂಲಕ ಬಾಂಬ್ ಬೆದರಿಕೆ ಹಾಕಿದ್ದ ಆರೋಪಿಯನ್ನ ಸಂಜಯ ನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ.

ಗಾಜಿಯಾಬಾದ್ ನ ನಿಶಾಂತ್ ತ್ಯಾಗಿ(36) ಬಂಧಿತ ಆರೋಪಿ. ಈತ ಬೆಂಗಳೂರಿನ ಇಸ್ರೋ ಕಚೇರಿಗೆ ಬಾಂಬೆ  ಇದೆ ಎಂದು ಇ-ಮೇಲ್ ಮೂಲಕ ಬೆದರಿಕೆ ಹಾಕಿದ್ದನು. ಕೃತ್ಯ ನಡೆದ 24 ಗಂಟೆಯೊಳಗೆ ಪೊಲೀಸರು ಆರೋಪಿ ನಿಶಾಂತ್ ತ್ಯಾಗಿಯನ್ನ ಹೆಡೆಮುರಿ ಕಟ್ಟಿದ್ದಾರೆ.

ಉತ್ತರ ಪ್ರದೇಶದಿಂದ ಹುಸಿ ಬೆದರಿಕೆ ಬಂದಿತ್ತು. ಆರೋಪಿ ಮಾನಸಿಕ ಅಸ್ವಸ್ಥನಾಗಿದ್ದು,  ಮೊಬೈಲ್ ಪರಿಶೀಲನೆ ವೇಳೆ ಇ-ಮೇಲ್  ಮಾಡಿದ್ದು  ದೃಢವಾಗಿದೆ. ಬಂಧಿತ ಆರೋಪಿಯನ್ನು  ವಶಕ್ಕೆ ಪಡೆದು ಸ್ಥಳೀಯ ಪೊಲೀಸರ ಜೊತೆ ವಿಚಾರಣೆ ನಡೆಸಲಾಗುತ್ತಿದೆ.

Key words: arrest, accused, bomb threat, ISRO office, Bengaluru