ಕಾಂಗ್ರೆಸ್ ನಿಂದ SC, ST ಕಡೆಗಣನೆ: ಹಿಂದುಳಿದ ವರ್ಗಕ್ಕೆ ನಿರಂತರ ಅನ್ಯಾಯ-ಶ್ರೀರಾಮುಲು

ಮೈಸೂರು,ಮೇ,20,2026 (www.justkannada.in):  ಎಸ್. ಸಿ, ಎಸ್ ಟಿ ಸಮುದಾಯವನ್ನ ಕಾಂಗ್ರೆಸ್ ಕಡೆಗಣಿಸಿದೆ. ಹಿಂದುಳಿದ ವರ್ಗಕ್ಕೆ  ಕಾಂಗ್ರೆಸ್ ನಿರಂತರ ಅನ್ಯಾಯ ಮಾಡಿದೆ ಎಂದು ಮಾಜಿ ಸಚಿವ ಶ್ರೀರಾಮುಲು ತೀವ್ರ ವಾಗ್ದಾಳಿ ನಡೆಸಿದರು.

ಮೈಸೂರಿನಲ್ಲಿ ಇಂದು ಮಾತನಾಡಿದ ಶ್ರೀರಾಮುಲು, ತಾವು ಏನೇ ಮಾಡಿದರೂ ಕೂಡ ಈ ಎರಡೂ ಸಮುದಾಯದವರು  ಕಾಂಗ್ರೆಸ್ ಪಕ್ಷಕ್ಕೆ ವೋಟ್ ಹಾಕ್ತಾರೆ ಎಂದು ಭಾವಿಸಿದ್ದಾರೆ.  ಈ ಸರ್ಕಾರದ ಯಡವಟ್ಟುನಿಂದ ಹಿಂದುಳಿದ ವರ್ಗಗಳಿಗೆ ಅನ್ಯಾಯವಾಗುತ್ತಿದೆ.  ಹಿಂದುಳಿದ ವರ್ಗಗಳಿಗೆ ನಿರಂತರ ಅನ್ಯಾಯವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮೀಸಲಾತಿ ಕಲ್ಪಿಸಿದರೂ ಬಿಜೆಪಿಗೆ ಚುನಾವಣೆಯಲ್ಲಿ ಸೋಲಾಯಿತು.  ಕಾಂಗ್ರೆಸ್ ನದ್ದು ನರಿಯಂತಹ ಬುದ್ದಿ. ಮೀಸಲಾತಿ ಹಂಚಿಕೆಯಲ್ಲಿ ಕಾಂಗ್ರೆಸ್ ದ್ವಿಮುಖ ನೀತಿ ಅನುಸರಿಸಿದೆ ಎಂದು ಶ್ರೀರಾಮುಲು ಟೀಕಿಸಿದರು.

Key words: Congress, neglect,  SC, ST SriRamulu