ಬೆಂಗಳೂರು,ಜುಲೈ,4,2026 (www.justkannada.in): ಎಸ್ ಐಆರ್ ನಲ್ಲಿ ಲೋಪವಾಗುತ್ತಿದೆ ಎಂಬ ವಿಪಕ್ಷಗಳ ಆರೋಪ ಕುರಿತು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಪ್ರತಿಕ್ರಿಯಿಸಿದ್ದಾರೆ.
ಈ ಕುರಿತು ಮಾತನಾಡಿರುವ ಗೃಹ ಸಚಿವ ಪ್ರಿಯಾಂಕ್ ಖರ್ಗೆ, ಕಾನೂನು ಮೀರಿ ಯಾರು ಏನು ಮಾಡುವುದಕ್ಕೂ ಆಗುವುದಿಲ್ಲ. ಚುನಾವಣಾ ಆಯೋಗದ ವಿಕ್ಷಕರು ಇರುತ್ತಾರೆ. ಲೋಪ ಆಗಿದ್ದರೇ ಆಯೋಗ ಕ್ರಮ ತೆಗೆದುಕೊಳ್ಳಬಹುದು. ಸರ್ಕಾರ ಯಾರಿಗೂ ಒತ್ತಾಯ ಮಾಡಿ ಎಸ್ ಐಆರ್ ಮಾಡಿಸುತ್ತಿಲ್ಲ ಎಂದರು.
ಸಮುದಾಯ ಭವನ ಕಚೇರಿಯಲ್ಲಿ ಎಸ್ ಐಆರ್ ಮಾಡಿ ಅಂತಾ ಹೇಳಿಲ್ಲ. ಎಸ್ ಐಆರ್ ಬಗ್ಗೆ ಜನರಲ್ಲಿ ಆತಂಕ ಇರೋದು ನಿಜ. ಅದಕ್ಕೆ 12 ಪ್ರಶ್ನೆ ಕೇಳಿದ್ದೇವೆ ಚುನಾವಣಾ ಆಯೋಗ ಉತ್ತರಿಸಿಲ್ಲ. ಎಸ್ ಐ ಆರ್ ಪ್ರಕ್ರಿಯೆ ಬಗ್ಗೆ ಜನರಿಗೆ ಆತಂಕ ಸಂಶಯ ಇದೆ. ರೂಲ್ಸ್ ಮಾಡೋದು ನಾವಲ್ಲ. ಆಯೋಗ ಉತ್ತರ ಕೊಡಬೇಕು ಎಂದರು.
Key words: government, SIR, Home Minister, Priyank Kharge







